Tejasswi Prakash : ʼಕಾಂತಾರʼ ಚಿತ್ರದ ಹಾಡನ್ನು ಕನ್ನಡದಲ್ಲಿ ಹಾಡಿದ ಬಾಲಿವುಡ್‌ ಬಿಗ್‌ಬಾಸ್‌ ವಿನ್ನರ್‌ ತೇಜಸ್ವಿ, ಮನಗೆದ್ದಳು ಈ ನಟಿ, ವೀಡಿಯೋ ವೈರಲ್‌

Tejasswi Prakash on Kantara : ಕಳೆದ ವರ್ಷ ತೆರೆ ಕಂಡ ಬ್ಲಾಕ್ ಬ್ಲಾಸ್ಟರ್ ಹಿಟ್ ಸಿನೆಮಾ ಕಾಂತಾರ ಸಿನಿಮಾದ ಹವಾ ಹೇಗಿದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ ತಪ್ಪಾಗದು. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು ಗೊತ್ತಿರುವ ವಿಚಾರವೇ!! ಅಷ್ಟೇ ಏಕೆ ಕಾಂತಾರ ಸಿನಿಮಾ (Kantara Cinema) ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಹಳೆ ವಿಚಾರ. ಇದೀಗ, ಕಾಂತಾರ ಸಿನಿಮಾದ ಹಾಡು ಹಿಂದಿ ಹಿಂದಿ ಕಿರುತೆರೆಯಲ್ಲಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ತೇಜಸ್ವಿ ಪ್ರಕಾಶ್(Tejasswi Prakash) ಅವರ ಕಂಠದಲ್ಲಿ ಮೂಡಿಬಂದಿದ್ದು, ಇದನ್ನು ಕೇಳಿದ ಮಂದಿ ಅರೇವ್ಹಾ!! ಎಂದು ಮೆಚ್ಚಿಕೊಂಡು ಶಹಭಾಶ್ಗಿರಿಯ ಸುರಿಮಳೆಗೈಯುತ್ತಿದ್ದಾರೆ.

ತೇಜಸ್ವಿ ಪ್ರಕಾಶ್ ಅವರು ಕಿರುತೆರೆಯಲ್ಲಿ ತೊಡಗಿಸಿಕೊಂಡು ಸುದೀರ್ಘ 11 ವರ್ಷ ಕಳೆದಿದ್ದಾರೆ. ತನ್ನ ನಟನೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಹಿಂದಿ ನಟಿ ತೇಜಸ್ವಿ ಪ್ರಕಾಶ್ (Tejasswi Prakash) ಅವರು ‘ಹಿಂದಿ ಬಿಗ್ ಬಾಸ್ ಸೀಸನ್ 15 (‘Hindi Bigg Boss – Season 15’) ವಿನ್ನರ್ ಕೂಡ ಆಗಿ ಕಪ್ ಮುಡಿಗೇರಿಸಿಕೊಂಡಿದ್ದರು. ತಮ್ಮ ನಟನೆಯ ಜೊತೆಗೆ ಮಧುರ ಕಂಠ ಮಾಧುರ್ಯತೆ ಹೊಂದಿರುವ ತೇಜಸ್ವಿ ಅವರು ಕನ್ನಡದ ಹಿಟ್ ಸಿನೆಮಾ ಕಾಂತಾರ ಸಿನಿಮಾದ ಹಾಡೊಂದನ್ನು ಅಚ್ಚ ಕನ್ನಡದಲ್ಲಿಯೇ ಯಾವುದೇ ಲೋಪದೋಷಗಳಿಲ್ಲದೆ ಹಾಡುವ ಮೂಲಕ ಕನ್ನಡಿಗರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ‘ನಾಗಿನ್ 6’ಧಾರಾವಾಹಿಯ ಆಫರ್ ಬಾಚಿಕೊಂಡ ನಟಿ ತೇಜಸ್ವಿ ಪ್ರಕಾಶ್ ಹಿಂದಿ ಮಾತ್ರವಲ್ಲದೆ ಮರಾಠಿ ಭಾಷೆಯಲ್ಲಿಯು ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ (Social Media) ಸದಾ ಆಕ್ಟೀವ್ ಆಗಿರುವ ನಟಿ ಅಭಿಮಾನಿಗಳ ಮೋಸ್ಟ್ ಫೇವರೇಟ್ ಎಂದರೆ ತಪ್ಪಾಗದು. ಇನ್​ಸ್ಟಾಗ್ರಾಮ್​ನಲ್ಲಿ (Instagram ) ಈ ನಟಿಗೆಬರೋಬ್ಬರಿ 67 ಲಕ್ಷ ಮಂದಿ ಹಿಂಬಾಲಕರಿದ್ದಾರೆ.

ಕನ್ನಡಿಗರಾಗಿದ್ದುಕೊಂಡು ಕನ್ನಡದಲ್ಲಿ ಹಿಂದೆ ಮುಂದೆ ನೋಡುವ ಜನರ ಮುಂದೆ ಹಿಂದಿ ನಟಿ ತೇಜಸ್ವಿ ಪ್ರಕಾಶ್ ‘ಕಾಂತಾರ’ ಚಿತ್ರದ (Tejasswi Prakash on Kantara ) ‘ಕರ್ಮದ ಕಲ್ಲನು..’ ಹಾಡನ್ನು ಕನ್ನಡದಲ್ಲೇ ಹಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಭಾಜನರಾಗಿದ್ದಾರೆ.

‘ಕರ್ಮದ ಕಲ್ಲನು ಎಡವಿದ ಮನುಜನ
ಬೆರಳಿನ ಗಾಯವು ಮಾಯದು
ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ
ಗುಡಿಯಲಿ ದೈವವು ಕಾಯದು
ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ
ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ..’

ಈ ಸಾಲುಗಳನ್ನು ನಟಿ ಕನ್ನಡದಲ್ಲಿ ಯಾವುದೇ ಧೋಷವಿಲ್ಲದೇ ಹಾಡಿದ್ದು, ಈ ಹಾಡಿನ ಅರ್ಥವನ್ನು ಇಂಗ್ಲಿಷ್​ನಲ್ಲಿ ಬರೆದುಕೊಂಡಿದ್ದಾರಂತೆ. ಹಿಂದಿ ನಟಿ ತೇಜಸ್ವಿ ಪ್ರಕಾಶ್ ನಟನೆ ಜೊತೆಗೆ ಉತ್ತಮ ಸಿಂಗರ್ ಎಂಬುದನ್ನು ವೀಡಿಯೋ ನಿರೂಪಿಸುತ್ತದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದ್ದು, ಇದಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿ ನಟಿಯ ಅಭಿಮಾನೀ ಬಳಗ ಕಾಮೆಂಟ್ ಮಾಡುತ್ತಿದ್ದು ಸದ್ಯ 20 ಲಕ್ಷಕ್ಕೂ ಅಧಿಕ ಮಂದಿಯ ಈ ವೀಡಿಯೊವನ್ನು ವೀಕ್ಷಣೆ ಮಾಡಿದ್ದಾರೆ.

Leave A Reply

Your email address will not be published.