Home ದಕ್ಷಿಣ ಕನ್ನಡ ಪುತ್ತೂರು: ಸಂದರ್ಶಕ ವೀಸಾದಲ್ಲಿ ತೆರಳಿದ್ದ ಕುಂಬ್ರದ ವ್ಯಕ್ತಿ ಮದೀನಾದಲ್ಲಿ ಸಾವು

ಪುತ್ತೂರು: ಸಂದರ್ಶಕ ವೀಸಾದಲ್ಲಿ ತೆರಳಿದ್ದ ಕುಂಬ್ರದ ವ್ಯಕ್ತಿ ಮದೀನಾದಲ್ಲಿ ಸಾವು

Hindu neighbor gifts plot of land

Hindu neighbour gifts land to Muslim journalist

ಸಂದರ್ಶಕ ಸೌದಿ ಅರೇಬಿಯ ವೀಸಾದಲ್ಲಿ ಬಂದಿದ್ದ ಪುತ್ತೂರಿನ ವ್ಯಕ್ತಿಯೊಬ್ಬರು ಮದೀನಾದಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಪುತ್ತೂರಿನ ಕುಂಬ್ರ ಮೂಲದ ಅಬ್ದುರಹ್ಮಾನ್’ (72) ಎಂದು ಗುರುತಿಸಲಾಗಿದೆ. ಮದೀನಾಕ್ಕೆ ಭೇಟಿ ನೀಡಲು ಮತ್ತು ಉಮ್ರಾ ಮಾಡಲು ಅವರು ತಮ್ಮ ಮಗನೊಂದಿಗೆ ಜಿಜಾನ್‌ನಿಂದ ಹೊರಟಿದ್ದರು.

ಇಂಡಿಯನ್ ಕಲ್ಚರಲ್ ಫೌಂಡೇಶನ್ (ಐಸಿಎಫ್) ಜೀಸನ್‌ ಸೆಂಟ್ರಲ್‌ ಕಮಿಟಿ ಏರ್ಪಡಿಸಿದ ಬಸ್‌ನಲ್ಲಿ ಮದೀನಾಕ್ಕೆ ಪ್ರಯಾಣಿಸುತ್ತಿದ್ದರು. ಶುಕ್ರವಾರ ಜುಮುಅದಲ್ಲಿ ಪಾಲ್ಗೊಂಡು ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಿಧನರಾದರು.

ಕೆ.ಸಿ.ಎಫ್ ಮದೀನಾ, ಮುನವ್ವರ ಸೆಕ್ಟರ್ ನಾಯಕರಾದ ಅಬ್ದುಲ್ ರಜಾಕ್ ಉಳ್ಳಾಲ್, ಹಾಜುದ್ದೀನ್‌ ಸುಳ್ಯ, ಜಬ್ಬಾರ್ ಉಪ್ಪಿನಂಗಡಿ, ಹುಸೈನರ್ ಮಾಪಲ್ ಹಾಗೂ ಫೈಝಲ್ ಸಂತೋಷ್ ನಗರ ಇವರ ತಂಡದ ಮೂಲಕ ಜನಾಝದ ಅಂತ್ಯಕ್ರಿಯೆಗೆ ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಮದೀನದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಯಿತು.