Home ದಕ್ಷಿಣ ಕನ್ನಡ ಸಾಲೆತ್ತೂರು: ಕೊರಗಜ್ಜನ ವೇಷಧರಿಸಿ ಅವಹೇಳನ ನಡೆಸಿದ್ದ ವರನ ಮಂಜೇಶ್ವರದ ಮನೆಗೆ ಕಿಡಿಗೇಡಿಗಳಿಂದ ದಾಳಿ!! ಕಿಟಕಿ ಹಾಗೂ...

ಸಾಲೆತ್ತೂರು: ಕೊರಗಜ್ಜನ ವೇಷಧರಿಸಿ ಅವಹೇಳನ ನಡೆಸಿದ್ದ ವರನ ಮಂಜೇಶ್ವರದ ಮನೆಗೆ ಕಿಡಿಗೇಡಿಗಳಿಂದ ದಾಳಿ!! ಕಿಟಕಿ ಹಾಗೂ ಗೇಟ್ ಗೆ ಹಾನಿ-ಪೊಲೀಸರಿಗೆ ದೂರು

Hindu neighbor gifts plot of land

Hindu neighbour gifts land to Muslim journalist

ಮದುವೆ ಮನೆಯಲ್ಲಿ ಕೊರಗಜ್ಜನ ವೇಷ ಧರಿಸಿ ಅವಹೇಳನ ನಡೆಸಿದ ಮದುಮಗನ ಮಂಜೇಶ್ವರದಲ್ಲಿರುವ ಮನೆಗೆ ಕಿಡಿಗೇಡಿಗಳು ದಾಳಿ ನಡೆಸಿದ್ದು,ಘಟನೆಯಿಂದಾಗಿ ಮನೆಗೆ ಹಾನಿಯಾಗಿದೆ.

ಬೈಕ್ ನಲ್ಲಿ ಬಂದಿದ್ದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದ್ದು,ಮಂಜೇಶ್ವರದಲ್ಲಿರುವ ವರನ ಮನೆಯ ಗೇಟ್ ಗೆ ಕಾವಿ ಬಣ್ಣ ಬಳಿದು,ಮನೆಯ ಕಿಟಕಿಗೆ ಕಲ್ಲೆಸೆದು ಹಾನಿಗೈಯ್ಯಲಾಗಿದೆ.

ಕಿಡಿಗೇಡಿಗಳ ಕೃತ್ಯವನ್ನು ಕಂಡ ಮನೆಮಂದಿ ಗಾಬರಿಯಿಂದ ಬೊಬ್ಬೆ ಹೊಡೆದಾಗ ಪರಾರಿಯಾಗಿದ್ದು, ಈ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ.