HomeNewsAfghanistan earthquake: ಅಫ್ಘಾನಿಸ್ತಾನದಲ್ಲಿ ಭೂಕಂಪ: ಸಾವಿನ ಸಂಖ್ಯೆ 1,100ಕ್ಕೆ ಏರಿಕೆ: ಭಾರತದಿಂದ 1,000 ಟೆಂಟ್‌ಗಳು, 15...

Afghanistan earthquake: ಅಫ್ಘಾನಿಸ್ತಾನದಲ್ಲಿ ಭೂಕಂಪ: ಸಾವಿನ ಸಂಖ್ಯೆ 1,100ಕ್ಕೆ ಏರಿಕೆ: ಭಾರತದಿಂದ 1,000 ಟೆಂಟ್‌ಗಳು, 15 ಟನ್ ಆಹಾರ ರವಾನೆ

Hindu neighbor gifts plot of land

Hindu neighbour gifts land to Muslim journalist

Afghanistan earthquake: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,100ಕ್ಕೆ ಏರಿದ್ದು, 3,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುನಾರ್‌, ನಂಗರ್ಹಾ‌ರ್, ಲಮ್ಮನ್ ಮತ್ತು ನುರಿಸ್ತಾನ್ ಪ್ರಾಂತ್ಯಗಳು ಹೆಚ್ಚು ಹಾನಿಗೊಳಗಾದವು. ಭೂಕಂಪದ ಪರಿಣಾಮವಾಗಿ ಪಾಕಿಸ್ತಾನ ಮತ್ತು ಭಾರತದಲ್ಲಿಯೂ ಭೂಕಂಪನ ಸಂಭವಿಸಿದ್ದು, ಅದರಲ್ಲಿ ಪೇಶಾವರ್, ಇಸ್ಲಾಮಾಬಾದ್, ಲಾಹೋ‌ರ್ ಮತ್ತು ದೆಹಲಿಯಂತಹ ನಗರಗಳು ಸೇರಿವೆ.

*ಅಫ್ಘಾನಿಸ್ತಾನಕ್ಕೆ ಭಾರತದಿಂದ 1,000 ಟೆಂಟ್‌ಗಳು, 15 ಟನ್ ಆಹಾರ ರವಾನೆ*

ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಜತೆ ಮಾತನಾಡಿ, 6.0 ತೀವ್ರತೆಯ ಭೂಕಂಪದಲ್ಲಿ 1000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆಯ ಕುರಿತು ಸಂತಾಪ ಸೂಚಿಸಿದರು. ಭಾರತವು ಕಾಬೂಲ್‌ನಲ್ಲಿ 1,000 ಟೆಂಟ್‌ಗಳನ್ನು ನೀಡಿದ್ದು, ಭಾರತೀಯ ಮಿಷನ್ 15 ಟನ್ ಆಹಾರ ಸಾಮಗ್ರಿಗಳನ್ನು ಕಾಬೂಲ್‌ನಿಂದ ಕುನಾರ್‌ಗೆ ಕಳುಹಿಸಿದೆ ಎಂದು ಅವರು ಹೇಳಿದರು. ಭಾರತದಿಂದ ಹೆಚ್ಚಿನ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುವುದು ಎಂದು ಜೈಶಂಕ‌ರ್ ಹೇಳಿದರು.

*’ಸಹಾಯ ಮಾಡಲು ಸಿದ್ಧ’ – ಪ್ರಧಾನಿ ಮೋದಿ*

ಅಫ್ಘಾನಿಸ್ತಾನದಲ್ಲಿ ಸೋಮವಾರ ಕನಿಷ್ಠ 1000 ಜನರನ್ನು ಬಲಿತೆಗೆದುಕೊಂಡ 6.0 ತೀವ್ರತೆಯ ಭೂಕಂಪಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, “ಸಾವುಗಳಿಂದಾಗಿ ತೀವ್ರ ದುಃಖಿತನಾಗಿದ್ದೇನೆ” ಎಂದರು. “ಈ ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಮೃತರ ಕುಟುಂಬಗಳೊಂದಿಗೆ ಇವೆ” ಎಂದು ಅವರು ಹೇಳಿದರು. “ಬಾಧಿತರಿಗೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸಲು ಭಾರತ ಸಿದ್ಧವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

All India Thal Sainik Camp: ರಾಷ್ಟ್ರ ಮಟ್ಟದ ಎನ್‌ಸಿಸಿ “ಅಖಿಲ ಭಾರತ ಭೂಸೈನಿಕ” ಶಿಬಿರಕ್ಕೆ ನೆಲ್ಯಾಹುದಿಕೇರಿಯ ವಿನಂತಿ ಆಯ್ಕೆ

RELATED ARTICLES

Most Popular

Recent Comments