Dharmasthala Case: ಅನಾಮಿಕ ವ್ಯಕ್ತಿಯನ್ನು ಮೊದಲು ಬಂಧನ ಮಾಡಬೇಕು: ಕೆ.ಎಸ್.ಈಶ್ವರಪ್ಪ ಹೇಳಿಕೆ

Share the Article

Dharmasthala Case: ಧರ್ಮಸ್ಥಳ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಈ ಕೇಸ್‌ಗೆ ಕುರಿತಂತೆ ಅನಾಮಿಕ ವ್ಯಕ್ತಿಯನ್ನು ಮೊದಲು ಬಂಧಿಸಬೇಕು ಎಂದು ಹೇಳಿದ್ದಾರೆ.

ಧರ್ಮಸ್ಥಳದ ಹೆಸರು, ಹೆಗ್ಗಡೆಯವರ ಹೆಸರು ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಸರಕಾರ ಕೂಡಲೇ ಅನಾಮಿಕ ವ್ಯಕ್ತಿಯನ್ನು ಬಂಧನ ಮಾಡಬೇಕು. ಅನಾಮಿಕ ದೂರುದಾರನ ಪ್ರಕಾರ ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತುಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಆಧಾರ ದೊರಕಿಲ್ಲ.

ಒಬ್ಬ ವ್ಯಕ್ತಿ ನೂರಾರು ಹೆಣಗಳನ್ನು ಹೂಳಲು ಸಾಧ್ಯವೇ? ಇದರ ಹಿಂದೆ ಷಡ್ಯಂತ್ರವಿದೆ. ಸರಕಾರ ಅನಾಮಿಕ ವ್ಯಕ್ತಿಯನ್ನು ಬಂಧನ ಮಾಡಿ, ಆತನ ಹಿಂದೆ ಯಾರು ಇದ್ದಾರೆ ಎಂಬುವುದನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ICICI Bank: ಐಸಿಐಸಿಐ ಬ್ಯಾಂಕ್‌ನಿಂದ ಶಾಕಿಂಗ್‌ ನ್ಯೂಸ್‌

Comments are closed.