Priyank Kharge: RSS ಗೆ 300-400 ಕೋಟಿ ಹಣ ಹೇಗೆ ಬರುತ್ತದೆಂದು ನನಗೆ ಗೊತ್ತು- ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ

Priyank Kharge: ಆರ್ಎಸ್ಎಸ್ನಲ್ಲಿ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ಧಿ, ಕೊಳಕು ನಾಲಿಗೆ ಇವರದುʼ ಎಂದು ಪ್ರಿಯಾಂಕ ಖರ್ಗೆ ಅವರು ಶುಕ್ರವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ಮಾಡಿದರು.
ನಾನು ಆರ್ಎಸ್ಎಸ್ ಬ್ಯಾನ್ ಮಾಡುತ್ತೇನೆ ಎಂದು ಹೇಳಿಲ್ಲ. ನಾವು ಅಧಿಕಾರಿಕ್ಕೆ ಬಂದರೆ ಬ್ಯಾನ್ ಮಾಡೋಣ ತಗೋಳಿ. ಆರ್ಎಸ್ಎಸ್ ಬ್ಯಾನ್ ಮಾಡಲು 10 ಕಾರಣ ಕೊಡಿ ಎಂದು ಬಿಜೆಪಿ ಕೇಳುತ್ತಾರೆ. ಆರ್ಎಸ್ಎಸ್ ಅವರು 100 ವರ್ಷದಲ್ಲಿ ದೇಶದ ಸಬಲೀಕರಣಕ್ಕಾಗಿ ಮಾಡಿದ 10 ಒಳ್ಳೆಯ ಕೆಲಸ ಹೇಳಲಿ ಎಂದು ಹೇಳಿದರು.
ಆರ್ಎಸ್ಎಸ್ನವರಿಗೆ 300-400 ಕೋಟಿ ಹಣ ಎಲ್ಲಿಂದ ಬರುತ್ತದೆ? ಎನ್ನುವುದು ನನಗೆ ಗೊತ್ತು. ಆರ್ಆರ್ಎಸ್ ಚೈಲಾ ಬಿಜೆಪಿಗಳಿದ್ದಾರೆ. ಇದನ್ನು ಹೇಳುವುದಕ್ಕೆ ನಾನು ಹೆದರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Actress Ranya Rao: ನಟಿ ರನ್ಯಾ ರಾವ್ಗೆ ಬಿಗ್ ಶಾಕ್ ನೀಡಿದ ಇಡಿ: ಕೋಟಿ ಕೋಟಿ ಮೌಲ್ಯದ ಆಸ್ತಿ ಜಪ್ತಿ
Comments are closed.