Karnataka-Kerala: ಕರ್ನಾಟಕ- ಕೇರಳ ಸಂಪರ್ಕಿಸುವ ಕುಟ್ಟ ತೋಲ್ ಪಟ್ಟಿ ರಸ್ತೆಯ ಅವ್ಯವಸ್ಥೆ – ರಸ್ತೆ ದುರಸ್ತಿಗೊಳಿಸದೆ ಸಾರ್ವಜನಿಕರ ಪರದಾಟ

Karnataka-Kerala: ಕರ್ನಾಟಕದಿಂದ ಕೇರಳಕ್ಕೆ ಸಂಪರ್ಕಿಸುವ ಕುಟ್ಟ ತೋಲ್ಪಟ್ಟಿ ರಸ್ತೆ ಸಂಪೂರ್ಣವಾಗಿ ಹದಗಟ್ಟಿದ್ದು, ದಿನಕ್ಕೆ ನೂರಾರು ಸಂಖ್ಯೆಯಲ್ಲಿ ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ನರಕ ಯಾತನೆ ಅನುಭವಿಸುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಈ ರಸ್ತೆ ದುರಸ್ತಿಗೆ ಆಗ್ರಹಿಸಿದರೂ ಕೂಡ ಇದುವರೆಗೂ ಕೂಡ ಯಾವುದೇ ರೀತಿಯ ದುರಸ್ತಿ ಕಾರ್ಯವಾಗಲಿ ಅಥವಾ ಮರು ಡಾಮರೀಕರಣವಾಗಲಿ ನಡೆದಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ಈ ಭಾಗದ ಜನರು ಹೆಚ್ಚಾಗಿ ಆರೋಗ್ಯ ಸಮಸ್ಯೆ ಎದುರಾದಾಗ ಹಾಗೂ ಹೆರಿಗೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಇದ್ದರೂ ಕೂಡ ಯಾವುದೇ ಸವಲತ್ತುಗಳು ಇಲ್ಲದರಿಂದ ಹೆಚ್ಚಾಗಿ ಮಾನಂದ್ವಾಡಿ ಆಸ್ಪತ್ರೆಗೆ ತೆರಳಬೇಕಾದರಿಂದ ಬಾಣಂತಿಯರನ್ನು ವಾಹನದಲ್ಲಿ ಕರೆದುಕೊಂಡು ಹೋಗಲು ಹರ ಸಾಹಸ ಪಡುವವರ ಗೋಳು ಹೇಳ ತಿರದಾಗಿದೆ. ಕನಿಷ್ಠ ಮಳೆ ಬಿಟ್ಟ ತಕ್ಷಣವೇ ಈ ಬಗ್ಗೆ ಸೂಕ್ತವಾಗಿ ಕ್ರಮ ಕೈಗೊಳ್ಳುವಂತೆ ನಾಗರಿಕರು, ಆಗ್ರಹಿಸಿದ್ದಾರೆ.
Comments are closed.