Actor Darshan: ನಟ ದರ್ಶನ್ ಬಿಡುಗಡೆ ಬಗ್ಗೆ ದಸರೀಘಟ್ಟ ಚೌಡೇಶ್ವರಿ ದೇವಿ ಕಳಸದಲ್ಲಿ ಪ್ರಶ್ನೆ ಕೇಳಲು ಮೊರೆ ಹೋದ ಅಭಿಮಾನಿಗಳು! ಅಷ್ಟಕ್ಕೂ ದೇವಿ ಕೊಟ್ಟ ಉತ್ತರವೇನು?

Actor Darshan: ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದ ಸಿನಿಮಾ ನಟ ದರ್ಶನ್ (Actor Darshan) ಇದೀಗ ರೇಣುಕಾ ಸ್ವಾಮಿ (RenukaSwamy) ಯನ್ನು ಪಟ್ಟಣಗೆರೆ ಶೆಡ್‌ ನಲ್ಲಿ ವಿಕೃತವಾಗಿ ಕೊಲೆ ಮಾಡಿರುವ ಆರೋಪದ ಮೇಲೆ ಸದ್ಯ ಜೈಲಿನಲ್ಲಿದ್ದಾರೆ. ಆದ್ರೆ ದರ್ಶನ್ ಅವರ ಈ ಜೈಲು ವಾಸದಿಂದ ಕೆಲವು ಅಭಿಮಾನಿಗಳು ತುಂಬಾ ಹತಾಶೆ ಆಗಿದ್ದಾರೆ. ಅವರ ಬಿಡುಗಡೆಗಾಗಿ ಹಾತೋರೆಯುತ್ತಿದ್ದಾರೆ.

Udupi: ಮನೆಯಲ್ಲಿ ಅಗ್ನಿ ಅವಘಡ; ಉಡುಪಿಯ ಶೆಟ್ಟಿ ಬಾರ್‌ & ರೆಸ್ಟೋರೆಂಟ್‌ ಮಾಲೀಕ ಸಾವು

ಅಂತೆಯೇ ಇದೀಗ ಅವರ ಅಭಿಮಾನಿಗಳು ದರ್ಶನ್ ನಿರಪರಾಧಿಯಾಗಿ ಜೈಲಿನಿಂದ ಹೊರಬರಲಿ ಎಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ, ಅದರಂತೆ ಅಭಿಮಾನಿಗಳಿಬ್ಬರು ಪ್ರಸಿದ್ಧ  ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಬಗ್ಗೆ ಪ್ರಶ್ನೆ ಕೇಳಿರುವ ವಿಚಾರ ವೈರಲ್ ಆಗಿದೆ.

ಹೌದು, 800 ವರ್ಷಗಳ ಇತಿಹಾಸ ಇರುವ ತುಮಕೂರು ಜಿಲ್ಲೆಯ   ತಿಪಟೂರು ತಾಲೂಕಿನ ಆದಿಚುಂಚನಗಿರಿ ಶಾಖ ಮಠದಲ್ಲಿನ ಪ್ರಸಿದ್ಧ ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳಿದ್ದಾರೆ. ದೇವಿಯ ಕಳಸದ ಮುಂದೆ ದರ್ಶನ್ ಬಿಡುಗಡೆ ಆಗ್ತಾರಾ ಎಂದು ಪ್ರಶ್ನೆ ಕೇಳಿದ್ದಾರೆ.

“ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿದೆಯೋ ಇಲ್ಲೋ ಗೊತ್ತಿಲ್ಲ. ನಮಗೆ ಅವರು ಹೊರಗಡೆ ಬರಬೇಕು. ಯಾವಾಗ ಅವರು ಹೊರಬರುತ್ತಾರೆ ಎಂದು ಕೇಳಿದ್ದಾರೆ” ಅದಕ್ಕೆ ದೇವಿ ಏನೂ ಕೂಡ ಉತ್ತರ ನೀಡುತ್ತಿಲ್ಲ. ಎಷ್ಟು ದಿವಸ ಆಗುತ್ತದೆ ಎಂದು ನಾವು ಕೇಳಿದೆವು ಅದಕ್ಕೆ ದೇವಿ ಇನ್ನೂ ಸಮಯಬೇಕು. ಈಗಲೇ ಹೇಳಲು ಆಗಲ್ಲ ಎಂದು ಹೇಳುತ್ತಿದ್ದಾಳೆ.  ನೋಡಬೇಕು ಮುಂದೆ ಎಂದು ಅಭಿಮಾನಿ ಉತ್ತರಿಸಿದ್ದಾರೆ.

ಕೊನೆಯದಾಗಿ ಅಭಿಮಾನಗಳ ಪ್ರಶ್ನೆಗೆ ದೇವಿ ಕಳಸದಲ್ಲಿ ಬರೆದಿದ್ದು, ಕಷ್ಟ ಇದೆ ಎಂದು ಉತ್ತರಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗ್ತಿದೆ.

ಚೌಡೇಶ್ವರಿಯ ಮಹಿಮೆ ಎಂತದ್ದು ಅಂದರೆ ಹಿಂದೆ ನಡೆದಿದ್ದು, ಇಂದು, ಮುಂದೆ ನಡೆಯುವ ಆಗುಹೋಗುಗಳನ್ನು ಬರೆದು ಹೇಳುವ ಮಹಾಶಕ್ತಿ ಈ ತಾಯಿಗಿದೆ. ಚೌಡೇಶ್ವರಿಯ ಉತ್ಸವದ ಮೂರ್ತಿಯ ಪೀಠವನ್ನು ಇಬ್ಬರು ವ್ಯಕ್ತಿಗಳು ಹಿಡಿದು ಕೊಳ್ಳುತ್ತಾರೆ.  ಮಣೆಯ ಮೇಲೆ ಅಕ್ಕಿ ಅಥವಾ ರಾಗಿ ಹಿಟ್ಟನ್ನು ಹಾಕಿದರೆ ಅದರ ಮೇಲೆ ದೇವಿ ಕಳಸದಲ್ಲಿ ಬರೆಯುತ್ತಾಳೆ. ದೇಶದ ನಾನಾ ಭಾಗಗಳಿಂದ ಭಕ್ತರು ತಮ್ಮ ಕಷ್ಟಗಳನ್ನು ಕೇಳಿಕೊಂಡು ಇಲ್ಲಿ ಬರುತ್ತಾರೆ. ಅಂತೆಯೇ ಇದೀಗ ದರ್ಶನ್ ಪರವಾಗಿ ಏಕೈಕ ಕಳಶದಲ್ಲಿ ಅಭಿಮಾನಿಗಳು ಪ್ರಶ್ನೆ ಕೇಳಿದ್ದು ಎಲ್ಲೆಡೆ ವೈರಲ್ ಆಗಿದೆ.

Actor Rakshith Shetty: ನಟ ರಕ್ಷಿತ್‌ ಶೆಟ್ಟಿ ವಿರುದ್ಧ FIR

 

Leave A Reply

Your email address will not be published.