Swami Koragajja: ಕುತ್ತಾರು ಕೊರಗಜ್ಜನ ಕಟ್ಟೆ ಕೋಲದಲ್ಲಿ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಜೊತೆ ನಟ ಸುನೀಲ್‌ ಶೆಟ್ಟಿ ಪರಿವಾರ ಭಾಗಿ

Swami Koragajja: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಸೇರಿ ಸುನೀಲ್‌ ಶೆಟ್ಟಿ, ಅಹಾನ್‌ ಶೆಟ್ಟಿ, ಆತಿಯಾ ಶೆಟ್ಟಿ, ಕೆ.ಎಲ್‌.ರಾಹುಲ್‌ ಭೇಟಿ ನೀಡಿದ್ದಾರೆ.

Pavitra Gowda: ನಟ ದರ್ಶನ್‌ ನಂತರ ಇದೀಗ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು

ಬಾಲಿವುಡ್‌ ನಟ, ತುಳುನಾಡಿನವರೇ ಆದ ಸುನೀಲ್‌ ಶೆಟ್ಟಿ ತಮ್ಮ ಪುತ್ರ, ಪುತ್ರಿ, ಅಳಿಯನ ಜೊತೆ ನಟಿ ಕತ್ರಿನಾ ಕೈಫ್‌ ಕೂಡಾ ಕೊರಗಜ್ಜನ ಸನ್ನಿಧಿಗೆ ಬಂದು ಅಜ್ಜನ ಕೋಲದಲ್ಲಿ ಭಾಗವಹಿಸಿದ್ದಾರೆ.

ಜುಲೈ 14 ರ ಭಾನುವಾರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ಕಟ್ಟೆ ಕೋಲ ನಡೆದಿತ್ತು. ಇದರಲ್ಲಿ ಇವರು ಭಾಗವಹಿಸಿದ್ದು, ಹರಕೆ ನೆರವೇರಿಸಿತ್ತು.
ಸಂಜೆ ಆರು ಗಂಟೆಗೆ ಕುತ್ತಾರಿಗೆ ಆಗಮಿಸಿದ್ದ ಬಾಲಿವುಡ್‌ನ ಈ ತಾರೆಯರು ಮಾಧ್ಯಮಗಳಿಗೆ ಮಾಹಿತಿ ನೀಡಬಾರದೆಂದು ಕೊರಗಜ್ಜನ ಕಟ್ಟೆಯ ಕಚೇರಿ ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದರೆನ್ನಲಾಗಿದೆ. ಫೋಟೋ ಕೂಡಾ ತೆಗೆಯದಂತೆ ಮನವಿ ಮಾಡಿದ್ದಾರೆ.

ಸಂಪ್ರದಾಯದ ಪ್ರಕಾರ ಕಟ್ಟೆಯೊಳಗೆ ಬೆಳಕಿಲ್ಲದೆ ಕೋಲ ನೆರವೇರಿದ್ದು, ಹೊರಗೆ ನಿಂತಿದ್ದ ಕತ್ರಿನಾ ಸೇರಿ ಉಳಿದವರು ಕೊರಗಜ್ಜನ ಈ ಪುಣ್ಯ ಸೇವೆಯಲ್ಲಿ ಭಾಗಿಯಾದರು.
ಸುನಿಲ್‌ ಶೆಟ್ಟಿ, ಅಹಾನ್‌ ಶೆಟ್ಟಿ, ಕೆ.ಎಲ್‌ ರಾಹುಲ್‌, ಅತಿಯಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್‌, ವಿ.ಎಂ.ಕಾಮತ್‌ ಸೇರಿ ಒಟ್ಟು 9 ಮಂದಿಯ ಹರಕೆಯ ಕೋಲವನ್ನು ಕೊರಗಜ್ಜನ ಕಟ್ಟೆಯಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು ಎಂದು ವರದಿಯಾಗಿದೆ.

Puri : 46 ವರ್ಷಗಳ ಬಳಿಕ ಪುರಿ ಜಗನ್ನಾಥನ ಭಂಡಾರ ತೆರೆದಿದ್ದೇಕೆ ? ಇಷ್ಟು ವರ್ಷ ಬಾಗಿಲು ಮುಚ್ಚಿದ್ದೇಕೆ? ಒಳಗೆ ಇರೃದಾದ್ರೂ ಏನು?

Leave A Reply

Your email address will not be published.