Kannada Anchor Aparna: ಅಪರ್ಣಾ ವೈಯಕ್ತಿಕ ಜೀವನದ ಮಾಹಿತಿ; ಮಕ್ಕಳು…ಪತಿ…ಹುಟ್ಟಿದ ಊರು

Kannada Anchor Aparna: ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದಿರುವಂತ ಅಪರ್ಣಾ ಅವರು ಇಹಲೋಕ ತ್ಯಜಿಸಿದ್ದಾರೆ. ಎರಡು ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೆಲವು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 11 ರಂದು ನಿಧನ ಹೊಂದಿದ್ದಾರೆ.

ಅಪರ್ಣಾ ಅವರ ವೈಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅದರ ಕುರಿತು ಮಾಹಿತಿ ಇಲ್ಲಿದೆ.

ಸಿನಿಮಾ ಪತ್ರಕರ್ತರೊಬ್ಬರ ಪುತ್ರಿ ಅಪರ್ಣಾ. ನಿರೂಪಕಿಯಾಗಿ ಕೆಲಸ ಮಾಡಿ ಗುರುತಿಸಿಕೊಂಡ ಇವರ ಪತಿಯ ಹೆಸರು ನಾಗರಾಜ್‌ ವಸ್ತಾರೆ. ಅಪರ್ಣಾ ಅವರು ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದ್ದು, ನಂತರ 1984 ರಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ಮಸಣದ ಹೂವು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡುತ್ತಾರೆ. ಇವರು 1989 ರಲ್ಲಿ ನಿರೂಪಕಿಯಾಗಿ ಕಿರುತೆರೆಗೆ ಕಾಲಿಡುತ್ತಾರೆ.

ಅಪರ್ಣಾ ಅವರಿಗೆ ನಾಗರಾಜ್‌ ವಸ್ತಾರೆ ಅವರೇ ಪ್ರಪಂಚವಾಗಿದ್ದರು. ಏಕೆಂದರೆ ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ತಮ್ಮ ಖಾಸಗಿ ವಿಚಾರದ ಕುರಿತು ಅಪರ್ಣಾ ಅವರು ಎಲ್ಲಿಯೂ ಹೇಳಿರಲಿಲ್ಲ. ಅಪರ್ಣಾ ಅವರ ಪತಿ ನಾಗರಾಜ್‌ ವಸ್ತಾರೆ ವಾಸ್ತುಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ.

Nepal Landslide: ಭೀಕರ ಮಳೆಗೆ ಭೂಕುಸಿತ; ಉಕ್ಕಿ ಹರಿಯುತ್ತಿರುವ ನೀರಿಗೆ ಬಿದ್ದ 63 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್‌; ಕಣ್ಮರೆ

Leave A Reply

Your email address will not be published.