Sandalwood: ನಾಳೆ ಇಬ್ಬರು ಸ್ಯಾಂಡಲ್ವುಡ್ ನಟರ ಭವಿಷ್ಯ ತೀರ್ಮಾನ
![Sandalwood](https://hosakannada.com/wp-content/uploads/2024/07/Darshan2.jpg)
Sandalwood: ಸ್ಯಾಂಡಲ್ವುಡ್ ಇದೀಗ ತುಂಬಾ ಚರ್ಚೆಯಲ್ಲಿದೆ. ನಾಳೆ ಇಬ್ಬರು ನಟರುಗಳ ಭವಿಷ್ಯ ನಿರ್ಧಾರವಾಗಲಿದೆ. ಇದು ನಿಜಕ್ಕೂ ಬಹಳ ಕುತೂಹಲ ಮೂಡಿಸಿದೆ. ಇಬ್ಬರೂ ಹೀರೋಗಳ ಬಗ್ಗೆ ಕೋರ್ಟ್ ನಾಳೆ ತೀರ್ಪು ನೀಡಲಿದೆ.
ಒಂದು ಕಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಆರೋಪಿ ನಟ ದರ್ಶನ್, ಇನ್ನೊಂದು ಕಡೆ ಡೈವೋರ್ಸ್ ಪ್ರಕರಣದಲ್ಲಿ ಯುವರಾಜ್ಕುಮಾರ್ ಬಗ್ಗೆ ತೀರ್ಪು ಪ್ರಕಟವಾಗಲಿದ್ದು, ನಾಳೆ ಇವರಿಬ್ಬರ ಭವಿಷ್ಯ ನಿರ್ಧಾರವಾಗಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿದೆ. ಇತ್ತ ರಾಘವೇಂದ್ರ ರಾಜ್ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಯುವ ರಾಜ್ಕುಮಾರ್ ಅವರು ವಿಚ್ಛೇದನ ಕೋರಿ ಅರ್ಜಿಯನ್ನು ಫ್ಯಾಮಿಲಿ ಕೋರ್ಟ್ನಲ್ಲಿ ಸಲ್ಲಿಸಿದ್ದು, ತಮ್ಮ ಹೆಂಡತಿಯ ವಿರುದ್ಧ ಅನೇಕ ಆರೋಪ ಮಾಡಿದ್ದಾರೆ.
Actor Darshan Case: ಪುಟ್ಟ ಕಂದಮ್ಮನಿಗೆ ಕೈದಿ ನಂಬರ್ 6106 ಫೋಟೋ ಶೂಟ್; ನೋಟಿಸ್ ಜಾರಿ