Tulsi: ತುಳಸಿ ಗಿಡಕ್ಕೆ ನಿಮ್ಮ ಬದುಕನ್ನು ಬದಲಿಸುವ ಶಕ್ತಿ ಇದೆ! ಈ ನಿಯಮ ಪಾಲಿಸಿ, ಧನ ಧಾನ್ಯದ ಕೊರತೆ ನಿವಾರಿಸಿ!

Tulsi: ಪ್ರತಿಯೊಂದು ಹಿಂದೂ ಮನೆಗಳಲ್ಲೂ ತುಳಸಿ ಸಸ್ಯವನ್ನು ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತಿನಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ತುಳಸಿಯು ಮನೆ ಮುಂದೆ ಇರುವ ಸಾಮಾನ್ಯ ಗಿಡವೆಂದು ಭಾವಿಸದಿರಿ. ಹೌದು, ತುಳಸಿ (Tulsi) ಗಿಡಕ್ಕೆ ನಿಮ್ಮ ಬದುಕನ್ನು ಬದಲಿಸುವ ಶಕ್ತಿ ಇದೆ. ನಿಮ್ಮ ಮನೆಯಲ್ಲಿ ಧನ, ಧಾನ್ಯದ ಕೊರತೆ ಇದ್ದಲ್ಲಿ ಅದಕ್ಕಾಗಿ ನೀವೂ ತುಳಸಿಯನ್ನು ಈ ರೀತಿ ಬಳಸಿ ನೋಡಿ.

Renukaswamy Murder Case: ರೇಣುಕಾ ಸ್ವಾಮಿ – ಪವಿತ್ರ ಗೌಡ ನಡುವೆ ನಡೆದ ಮೆಸೇಜ್ ಗಳು ಏನು ?! ತಿಳಿಯಲು ಇನ್ಸ್ಟಾಗ್ರಾಮ್ ಗೆ ಪತ್ರ ಬರೆದ ಪೋಲೀಸರು

ಆಹಾರದ ಕೊರತೆ ಇದ್ದಲ್ಲಿ ಶುಕ್ರವಾರದ ದಿನದಂದು ಮುಂಜಾನೆ ಸ್ನಾನ ಇತ್ಯಾದಿಗಳನ್ನು ಮಾಡಿ ಶುದ್ಧರಾಗಿ 11 ತುಳಸಿ ಎಲೆಗಳನ್ನು ಕಿತ್ತು ಈ 11 ತುಳಸಿ ಎಲೆಗಳನ್ನು ನೀವು ಹಿಟ್ಟುಗಳನ್ನಿಡುವ ಬಾಕ್ಸ್‌ನಕ್ಕಿ ಇಡಿ. ಹೀಗೆ ಮಾಡುವುದರಿಂದ ನೀವು ಎಂದಿಗೂ,ಆಹಾರದ ಕೊರತೆಯನ್ನು ಎದುರಿಸುವುದಿಲ್ಲ.

ಇನ್ನು ಅದೃಷ್ಟ ಒದಗಿ ಬರಲು ನೀವು ಪ್ರತಿದಿನ ತುಳಸಿಯ ಬಳಿ ಹಿಟ್ಟಿನ ದೀಪವನ್ನು ಬೆಳಗಿಸಬೇಕು. ಇದಕ್ಕಾಗಿ, ಹಿಟ್ಟಿನ ದೀಪದಲ್ಲಿ ತುಪ್ಪವನ್ನು ಹಾಕಿ ಮತ್ತು ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಮುಂಜಾನೆ ಮತ್ತು ಸಂಜೆ ಈ ಎರಡೂ ಸಮಯದಲ್ಲಿ ಉತ್ತರಕ್ಕೆ ಮುಖ ಮಾಡಿ ದೀಪ ಹಚ್ಚಿಡಬೇಕು. ಹೀಗೆ ಮಾಡುವುದರಿಂದ ನೀವು ಅದೃಷ್ಟವನ್ನು ಪಡೆಯಬಹುದು.

ನಿಮ್ಮ ಆರ್ಥಿಕ ಬಿಕ್ಕಟ್ಟನ್ನು ಅಥವಾ ಹಣದ ಸಮಸ್ಯೆಗಳನ್ನು ಬಗೆಹರಿಸಲು ತುಳಸಿ ಎಲೆಗಳನ್ನು ಶುದ್ಧವಾದ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ನಂತರ, ಅದನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ ಅಥವಾ ನೀವು ಹಣ ಇಡುವ ಜಾಗದಲ್ಲಿ ಇದನ್ನು ಇಡಿ. ಹೀಗೆ ಮಾಡುವುದರಿಂದ ಹಣದ ಒಳಹರಿವಿನ ದಾರಿಗಳು ತೆರೆದುಕೊಳ್ಳುತ್ತವೆ. ನಂತರ ನೀವು ಎಂದಿಗೂ ಹಣದ ಸಮಸ್ಯೆಗಳನ್ನು ಎದುರಿಸುವುದಿಲ್ಲ.

NEET Paper Leak: ನೀಟ್ ಪೇಪರ್ ಸೋರಿಕೆ ಪ್ರಕರಣ; 3 ಶಿಕ್ಷಕರು ಸೇರಿದಂತೆ 4 ಜನರ ವಿರುದ್ಧ ಎಫ್‌ಐಆರ್ ದಾಖಲು

Leave A Reply

Your email address will not be published.