H D kumarswamy: ಪ್ರಜ್ವಲ್ ವಿಡಿಯೋ ಬಿಡುಗಡೆ ಕುರಿತು ಕುಮಾರಸ್ವಾಮಿ ಹೇಳಿದ್ದಿಷ್ಟು !!

H D kumarswamy: ಅಶ್ಲೀಲ ವಿಡಿಯೋ ಪ್ರಕರಣದ ಸುಳಿಯಲ್ಲಿ ಸಿಲುಕಿ, ವಿದೇಶಕ್ಕೆ ಹಾರಿ ಸುಮಾರು ಒಂದು ತಿಂಗಳಿಂದ ನಾಡಿನ ಜನರಿಗೆ, ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಪ್ರಜ್ವಲ್ ರೇವಣ್ಣ(Prajwal Revanna) ವಿಡಿಯೋ ಮೂಲಕ ಕೊನೆಗೂ ಪ್ರತ್ಯಕ್ಷ ಆಗಿದ್ದಾರೆ. ಈ ಬೆನ್ನಲ್ಲೇ ವಿಡಿಯೋ ಕುರಿತು ಕುಮಾರಸ್ವಾಮಿ(H D kumarswamy) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Google : ಗೂಗಲ್ ನಲ್ಲಿ ಹುಡುಗಿಯರು ಹೆಚ್ಚು ಹುಡುಕೋದು ಇದನ್ನೇ !!

ಎಸ್‌ಐಟಿ ಮುಂದೆ ಶುಕ್ರವಾರ ಹಾಜರಾಗುತ್ತೇನೆಂದು ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಿರುವುದು ನಮಗೆ ಸ್ವಲ್ಪ ಸಮಾಧಾನ ತಂದಿದೆ. ನಾನು ಕೆಲ ದಿನಗಳ ಹಿಂದೆ ನನ್ನ ಮೇಲೆ, ದೇವೇಗೌಡರ(H D Devegowda)ಮೇಲೆ ಗೌರವ ಇದ್ದರೆ ಬಂದು ಸೆರೆಂಡರ್ ಆಗು ಎಂದಿದ್ದೆ. ಅದಕ್ಕೆ ಅವನು ಬೆಲೆ ಕೊಟ್ಟಿದ್ದಾನೆ ಎನಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: D K Shivkumar: EVM ಏನೂ ಆಗದಿದ್ರೆ ಓಕೆ, ಜನ ಈಗ ನಮ್ಮ ಪರ ಇದ್ದಾರೆ ಎಂದ ಡಿಕೆಶಿ – ಇದು ಸೋಲಿನ ಭಯವೇ ಇಲ್ಲ ಗೆಲುವಿನ ಭರವಸೆಯೇ ?!

ಅಲ್ಲದೆ ನನ್ನ ವಿರುದ್ದ ಷಡ್ಯಂತ್ರ ಮಾಡಲಾಗಿದೆ ತನಿಖೆಯಿಂದಲೇ ನಾನು ಹೊರಗೆ ಬರುತ್ತೇನೆಂದು ಪ್ರಜ್ವಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ”ತನಿಖೆಯಲ್ಲಿ ಆ ಎಲ್ಲಾ ಸತ್ಯಾಂಶಗಳು ಹೊರಗೆ ಬರಬೇಕು, ಯಾರು ಯಾರ ಪಾತ್ರಗಳು ಇವೆ ಅವೆಲ್ಲಾ ಹೊರಗೆ ಬರಬೇಕು, ಎಸ್‌ಐಟಿ ತನಿಖೆಯನ್ನು ಮಾಡುತ್ತಿರುವರು ಅದನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೆ ಕಾದು ನೋಡೋಣ ಎಂದರು.

 

 

Leave A Reply

Your email address will not be published.