Mangaluru: ಹರೇಕಳ-ಅಡ್ಯಾರ್‌ ಸೇತುವೆಯಲ್ಲಿ ಅಪಘಾತ; ಕಾರುಗಳ ಡಿಕ್ಕಿ

Mangaluru: ಉಳ್ಳಾಲ ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಗಾಯಗೊಂಡಿರುವ ಘಟನೆಯೊಂದು ಮೇ.27 ರಂದು ನಡೆದಿದೆ. ಈ ಗಟನೆ ಹರೇಕಳ-ಅಡ್ಯರ್‌ ನೂತನ ಸೇತುವೆಯಲ್ಲಿ ಸಂಭವಿಸಿದೆ.

ಇದನ್ನೂ ಓದಿ: Beauty Tips: ಡಲ್ಸ್ಕಿನ್ ಇದ್ರೆ ಟೆನ್ಷನ್ ಬೇಡ! ಈ ಟಿಪ್ಸ್ ಫಾಲೋ ಮಾಡಿ ಮುಖ ಫಳ ಫಳ ಅಂತ ಹೊಳೆಯುತ್ತೆ!

ಅಡ್ಯಾರ್‌ ಕಡೆಯಿಂದ ಹರೇಕಳ ಬರುತ್ತಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಅಲ್ಟೋ ಕಾರು ಹಾಗೂ ಎದುರಿನಿಂದ ಬಂದ ಇಕೋ ಸ್ಪೋರ್ಟ್ಸ್‌ ಕಾರುಗಳ ಮಧ್ಯೆ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: BS Yediyurappa: ಬಿಎಸ್‌ ಯಡಿಯೂರಪ್ಪ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ; ದೂರು ನೀಡಿದ್ದ ಮಹಿಳೆ ಸಾವು

ಹರೇಕಳ-ಅಡ್ಯಾರ್‌ ಸಂಪರ್ಕಿಸುವ ಸೇತುವೆಯಲ್ಲಿ ನಡೆದಿರುವ ಮೊದಲ ಅಪಘಾತ ಇದು. ಕಾರಿನಲ್ಲಿದ್ದ ಮಹಿಳೆ, ಸಹಪ್ರಯಾಣಿಕೆ ಹಾಗೂ ಇನ್ನೊಂದು ಕಾರಿನಲ್ಲಿದ್ದ ಚಾಲಕ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

1 Comment
  1. MUpOvNiPhCq says

    JjABnWbRD

Leave A Reply

Your email address will not be published.