Dharmasthala: ಧರ್ಮಸ್ಥಳದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಅಪಹರಣ; ಗಂಡನಿಂದ ದೂರು ದಾಖಲು

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಬಂಧಿ ಯುವಕನನ್ನು ಮದುವೆಯಾಗಿದ್ದ ಯುವತಿಯನ್ನು ಇದೀಗ ಯುವತಿ ಮನೆಯ ಸಂಬಂಧಿಕರು ಅಪಹರಿಸಿರುವ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಇದನ್ನೂ ಓದಿ: Viral News: ಮಹಿಳೆಯೊಬ್ಬರು ಆ ಮಧ್ಯರಾತ್ರಿ ಧೈರ್ಯ ಮಾಡಿ, ವಿಚಿತ್ರ ಘಟನೆಯ ರಹಸ್ಯ ಬಯಲು ಮಾಡೇ ಬಿಟ್ರು!

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಚಂದನ, ಮಂಜುನಾಥ್‌ ಜೋಡಿ ಎಪ್ರಿಲ್. 22 ರಂದು ಧರ್ಮಸ್ಥಳದಲ್ಲಿ ಮದುವೆ ಮಾಡಿಕೊಂಡಿದ್ದರು. ಆದರೆ ಚಂದನ ಸಂಬಂಧಿಗಳು ಮನೆಗೆ ನುಗ್ಗಿ ಪತ್ನಿಯನ್ನು ಅಪಹರಣ ಮಾಡಿರುವುದಾಗಿ ಗಂಡನಾದ ಮಂಜುನಾಥ್‌ ಪೇರೇಸಂದ್ರ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ಇದನ್ನೂ ಓದಿ: Body Hairs Turns White: ನಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಕೂದಲು ಮೊದಲು ಬೆಳ್ಳಗಾಗುತ್ತದೆ?

ಸಂಬಂಧಿಕರಿಂದ ತನ್ನನ್ನು ರಕ್ಷಣೆ ಮಾಡಿ ಎಂದು ಚಂದನ ವೀಡಿಯೋ ಮೂಲಕ ಗಂಡ ಮಂಜುನಾಥ ಹಾಗೂ ಪೊಲೀಸರಿಗೆ ಮನವಿ ಮಾಡಿರುವುದಾಗಿ ಕೂಡಾ ವರದಿಯಾಗಿದೆ.

Leave A Reply

Your email address will not be published.