Adhar Update: ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಕ್ಯಾನ್ಸಲ್ !! ಯಾಕಾಗಿ ಗೊತ್ತಾ ?

Adhar Update: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳು ಪ್ರಮುಖವಾದವು. ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಬಡವರ ಹಸಿವನ್ನು ನೀಗಿಸಲು ಸರ್ಕಾರ ಈ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಇದೀಗ ಈ ಎರಡು ಯೋಜನೆಗಳು ಕ್ಯಾನ್ಸಲ್ ಆಗುವ ಸುದ್ದಿ ಹೊರ ಬಿದ್ದಿದೆ.

ಇದನ್ನು ಓದಿ: IAF Plane Crash : ಭೀಕರ ಅಪಘಾತಕ್ಕೀಡಾದ ವಾಯುಪಡೆ ತರಬೇತಿ ವಿಮಾನ !! ಇಬ್ಬರು ಪೈಲಟ್‌ಗಳ ಸಾವು

ಹೌದು, ಸರ್ಕಾರ ಮೊದಲಿಂದಲೂ ಆಧಾರ್ ಕಾರ್ಡ್ ಅಪ್ಡೇಟ್(Adhar Update) ಮಾಡಿ ಎಂದು ಸಾಕಷ್ಟು ಭಾರಿ ಹೇಳುತ್ತಿದೆ. ಆದರೆ ಕೆಲವರನ್ನು ಬಿಟ್ಟರೆ ಯಾರೂ ಇದರ ಕಡೆ ಗಮನ ನೀಡುತ್ತಿಲ್ಲ. ಹೀಗಾಗಿ ಮುಳ್ಳನ್ನು ಮುಳ್ಳಿಂದಲೇ ತೆಗಿಬೇಕು ಎಂದು ತೀರ್ಮಾನಿಸಿದೆ. ಅಂದರೆ ಯಾರೆಲ್ಲಾ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವೋ ಅಂತವರು ಸರ್ಕಾರ ಕೊಡಮಾಡುವ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗುತ್ತಾರೆ. ಕೇವಲ ಈ ಯೋಜನೆ ಮಾತ್ರವಲ್ಲ ಸರ್ಕಾರದ ಯಾವ ಪ್ರಯೋಜನವನ್ನು ಪಡೆಯಲೂ ಅವರು ಅರ್ಹರಾಗಿರುವುದಿಲ್ಲ.

ಇದನ್ನು ಓದಿ: Tripthi dimri: ಅನಿಮಲ್​ ಚಿತ್ರಕ್ಕಾಗಿ ಪೂರ್ತಿ ಬೆತ್ತಲಾದ ನಟಿ ಖ್ಯಾತ ನಟಿ – ವೈರಲ್ ಆಯ್ತು ಬೆಡ್ ರೂಮ್ ವಿಡಿಯೋ !!

ಇನ್ನು ಆಧಾರ್ ಅಪ್ಡೇಟ್ ಮಾಡಿಸಲು ಡೆಡ್ ಲೈನ್ ಕೂಡ ಘೋಷಣೆ ಮಾಡಿದ್ದು ಡಿಸೆಂಬರ್ 14 ರವರೆಗೆ ಆನ್‌ಲೈನ್ ಆಧಾರ್ ಅಪ್‌ಡೇಟ್‌ಗಳಿಗೆ ಅವಕಾಶ ನೀಡಿದೆ. ಜೊತೆಗೆ 50 ರೂ ಪಾವತಿಸಬೇಕಾಗಿದೆ. ಅಂದಹಾಗೆ ಸರ್ಕಾರ ನೀಡಿದ ಈ ಗಡುವಿನ ಅವಧಿಯಲ್ಲಿ ಭಾರತೀಯ ನಿವಾಸಿಗಳು ತಮ್ಮ ಮಾಹಿತಿಯನ್ನು-ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್, ಬದಲಾಯಿಸಲು ಅಥವಾ ಸರಿಪಡಿಸಲು ಅವಕಾಶವನ್ನು ನೀಡವಾಗಿದೆ. ಇವುಗಳನ್ನು ಸಾರ್ವಜನಿಕರು ಇಮೇಲ್ ಇಲ್ಲದೇ ಆನ್‌ಲೈನ್ ಪೋರ್ಟಲ್ ಮೂಲಕ ಅಪ್ಡೇಟ್ ಮಾಡಬಹುದು.

Leave A Reply

Your email address will not be published.