HomeBreaking Entertainment News KannadaRajanikanth: ಸೂಪರ್ ಸ್ಟಾರ್ ರಜನಿಕಾಂತ್ ಗೆ ಒಲಿದು ಬಂದ ರಾಜ್ಯಪಾಲ ಪಟ್ಟ ?! ಯಾವ ರಾಜ್ಯ...

Rajanikanth: ಸೂಪರ್ ಸ್ಟಾರ್ ರಜನಿಕಾಂತ್ ಗೆ ಒಲಿದು ಬಂದ ರಾಜ್ಯಪಾಲ ಪಟ್ಟ ?! ಯಾವ ರಾಜ್ಯ ಗೊತ್ತಾ ? ಏನಿದು ಹೊಸ ಗುಡ್ ನ್ಯೂಸ್?

Hindu neighbor gifts plot of land

Hindu neighbour gifts land to Muslim journalist

Rajanikanth: ಸೂಪರ್ ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಜೈಲರ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿರುವ ಬೆನ್ನಲ್ಲೇ ಇನ್ನೊಂದು ಗುಸು ಗುಸು ಶುರುವಾಗಿದ್ದು, ರಜನಿಕಾಂತ್ ಅವರಿಗೆ ರಾಜ್ಯಪಾಲ ಪಟ್ಟ ಒಲಿದು ಬರಲಿದೆಯಾ ಎಂಬ ಅನುಮಾನಗಳು ಶುರುವಾಗಿದೆ.

ಹೌದು, ಕೆಲ ದಿನಗಳಿಂದ ರಜನಿಕಾಂತ್(Rajanikanth) ಅವರು ರಾಜ್ಯಪಾಲರಾಗಲಿದ್ದಾರೆ ಎಂದು ತಮಿಳುನಾಡಿನಲ್ಲಿ ಕೆಲ ದಿನಗಳಿಂದ ಭಾರೀ ಪ್ರಚಾರ ನಡೆಯುತ್ತಿದೆ. ಇತ್ತೀಚೆಗಷ್ಟೆ ರಜನಿಕಾಂತ್ ಉತ್ತರ ಭಾರತ ಪ್ರವಾಸ ಮಾಡಿದ್ದರು. ಈ ಆದೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದಾಗ ಈ ರಾಜ್ಯಪಾಲರ ವಿಚಾರ ಮುನ್ನೆಲೆಗೆ ಬಂದಿದೆ.

ಅಂದಹಾಗೆ ಈ ಕುರಿತು ರಜನಿ ಅವರ ಸಹೋದರ ಸತ್ಯನಾರಾಯಣ (Satyanarayana) ಪ್ರತಿಕ್ರಿಯಿಸಿದ್ದು, ರಾಜ್ಯಪಾಲರ ಹುದ್ದೆ ದೇವರ ಕೈಯಲ್ಲಿದೆ. ರಾಜ್ಯಪಾಲರ ಹುದ್ದೆ ಸಿಗುವ ಭರವಸೆ ನನಗಿಲ್ಲ, ಬಂದರೆ ಖುಷಿಯಾಗುತ್ತೆ ಎಂದು ಅವರು ಹೇಳಿದ್ದಾರೆ. ಆದರೆ ಅವರ ಈ ಮಾತನ್ನು ಕೇಳಿದ ಫ್ಯಾನ್ಸ್​ ಖಂಡಿತವಾಗಿಯೂ ರಾಜ್ಯಪಾಲರಾಗಿ ರಜನೀಕಾಂತ್​ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದೇ ಹೇಳುತ್ತಿದ್ದಾರೆ.

ಇನ್ನು ರಜನಿ ಅವರ ರಾಜಕೀಯ ಜೀವನದ ಕುರಿತು ಮಾತನಾಡಿದ ಸತ್ಯನಾರಯಣ ಅವರು ‘ರಾಜಕೀಯಕ್ಕೆ ಬರುವುದಿಲ್ಲ ಎಂದು ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯಕ್ಕೆ ಬರುವ ಯೋಚನೆ ಇಲ್ಲ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರೊಂದಿಗಿನ ರಜನಿ ಭೇಟಿಗೆ ಯಾವುದೇ ರಾಜಕೀಯ ಮಹತ್ವವಿಲ್ಲ ಎಂದು ಅವರು ಹೇಳಿದ್ದಾರೆ. ರಜನಿಕಾಂತ್​ ಅವರಿಗೆ ರಾಜ್ಯಪಾಲರ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವೂ ದೇವರ ಕೈಯಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Dr. G parameshwar: ಹಿಂದೂ ಧರ್ಮ ಯಾವಾಗ ಹುಟ್ಟಿತು, ಹುಟ್ಟಿಸಿದ್ದು ಯಾರು? ಉದಯನಿಧಿ ಬೆನ್ನಲ್ಲೇ ವಿವಾದವನ್ನು ಮೈಮೇಳೆದುಕೊಂಡ ಗೃಹ ಸಚಿವ ಪರಮೇಶ್ವರ್ !!

RELATED ARTICLES

2 COMMENTS

Most Popular

Recent Comments