Kerala: ಪತ್ರಿಕೋದ್ಯಮದ ನಾಲ್ಕು ‘Wʼ ಗಳು ಈಗ ‘D’ ಗೆ ಬದಲಾಗಿದೆ: ಹೈಕೋರ್ಟ್ ಹೇಳಿದ್ದೇನು ? : ಏನದು W – D ?!

latest news Kerala news media news four 'W's of journalism have now changed to 'D'

Kerala: ಕೇರಳ (Kerala) ಹೈಕೋರ್ಟ್, ನಿಖರವಾದ ಮತ್ತು ಸಮಗ್ರವಾಗಿ ವರದಿ ಮಾಡಲು ಪತ್ರಕರ್ತರಿಗೆ ಮಾರ್ಗಸೂಚಿಯಾಗಬೇಕಿರುವ ಚೌಕಟ್ಟು ಈಗ ಮರೆಯಾಗಿದೆ ಎಂದು ಹೇಳಿದೆ.

ಪತ್ರಿಕೋದ್ಯಮಕ್ಕೆಮಾರ್ಗಸೂಚಿಯಾಗಿರುವ ನಾಲ್ಕು W ಯಾರು, ಏನು, ಯಾವಾಗ, ಎಲ್ಲಿ ಇವುಗಳನ್ನು ಈಗ ನಾಲ್ಕು D ಗಳು- ಮಾನಹಾನಿಗೊಳಿಸು, ಅವಮಾನಿಸು, ಖಂಡಿಸು, ನಾಶಪಡಿಸು
ಇವುಗಳನ್ನು ಬದಲಾಯಿಸಲಾಗಿದೆ ಎಂದು ಕೇರಳ ಹೈಕೋರ್ಟಿನ ನ್ಯಾಯಮೂರ್ತಿಗಳಾದ ವಿ. ಜಿ ಅರುಣ್ ಹೇಳಿದ್ದಾರೆ.

‘ಪತ್ರಕರ್ತರಿಗೆ ವರದಿ ಮಾಡಲು ಮಾರ್ಗದರ್ಶನ ನೀಡುವ W ಗಳು ನಿಖರತೆ ಮತ್ತು ಸಮಗ್ರತೆಗೆ ಸಹಕಾರಿ. ಈ ನಾಲ್ಕು W ಮತ್ತು ಐದನೇ W- ಮಾಹಿತಿ ಕಲೆ ಹಾಕುವಲ್ಲಿ ಪತ್ರಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಆದರೆ ಇಲ್ಲಿ ನಮೂದಿಸಲಾದಂತಹ ವೀಡಿಯೊಗಳು, ಈ ನಾಲ್ಕು W ಗಳನ್ನು D ಗಳಿಂದ D ಬದಲಾಯಿಸಲು ಯೋಚಿಸಿ,” ಎಂದು ನ್ಯಾಯಾಲಯ ಹೇಳಿದೆ.

ಮಲಯಾಳಂ ಯುಟ್ಯೂಬ್ ವಾಹಿನಿ ಮರುನಾಡನ್ ಮಲಯಾಳಿಯಲ್ಲಿ ಅದರ ಸಂಪಾದಕ ಶಾಜನ್ ಸಕರಿಯಾ ಅವರು ಪ್ರಕಟಿಸಿದ ಒಂದು ಸುದ್ದಿ ಕುರಿತಂತೆ ನ್ಯಾಯಾಲಯದ ಮೇಲಿನಂತೆ ಹೇಳಿದೆ. ಈ ಟ್ಯೂಬ್ ಯುಟ್ಯೂಬ್ ವಾಹಿನಿ ಪ್ರಕಟಿಸಿದ ಸುದ್ದಿಯಲ್ಲಿ ಶಾಸಕ ಪಿ ವಿ ಶ್ರೀನಿಜಿನ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಲಾಗಿದೆ.

ಈ ಸುದ್ದಿ ಪ್ರಕಟಗೊಂಡ ನಂತರ ಸಕಾರಿಯ ವಿರುದ್ಧ ಪರಿಶಿಷ್ಟ ಜಾತಿ/ ಪಂಗಡಗಳ ದೌರ್ಜನ್ಯ ನಿಗ್ರಹ ಕಾಯಿದೆ ಹಾಗೂ ಕೇರಳ ಪೊಲೀಸ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆದರೆ ಪತ್ರಕರ್ತ ಪ್ರಕಾರ ತಾವು ಶಾಸಕರ ವಿರುದ್ಧ ವೀಡಿಯೋ ಪ್ರಸಾರ ಮಾಡಿದ್ದನ್ನು ಅವರು ಒಪ್ಪಿಕೊಂಡರೂ ಶಾಸಕರನ್ನು ಅವಮಾನಿಸುವ ಉದ್ದೇಶವಿರಲಿಲ್ಲ. ಸಂಶೋಧನೆ ಮತ್ತು ಮೂಲಗಳಿಂದ ಮಾಹಿತಿಯ ಆಧಾರದಲ್ಲಿ ಸುದ್ದಿ ಪ್ರಕಟಿಸಲಾಗಿದೆ ಎಂದಿದ್ದಾರೆ.

ಆದರೆ ಸಂಪಾದಕನಾಗಿ ಅವರು ಸುಳ್ಳು, ಆಧಾರರಹಿತ ಹಾಗೂ ಮಾನಹಾನಿಕರ ವಿರುದ್ಧ ಶಾಸಕರ ವಿರುದ್ಧ ಆರೋಪವಿದೆ. ನಿರೀಕ್ಷಣಾ ಜಾಮೀನು ಕೋರಿ ಸಕರಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ಜೂನ್ 16 ರಂದು ವಜಾಗೊಳಿಸಿತ್ತು. ಅವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರೆ ಕಳೆದ ಶುಕ್ರವಾರದ ತೀರ್ಪಿನಲ್ಲಿ ಹೈಕೋರ್ಟ್‌ ಕೂಡ ಅವರ ಅಪೀಲನ್ನು ತಿರಸ್ಕರಿಸಿದೆ ಹಾಗೂ ಹೊರನೋಟಕ್ಕೆ ಅವರು ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆಯನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಇದನ್ನು ಓದಿ:  Snake viral news: ಹಾಡು ಗುಣುಗಿಕೊಂಡು ಬೈಕ್ ಸವಾರಿ ಮಾಡುತ್ತ ಸಾಗುವಾಗ ಬೈಕಲ್ಲಿ ದುತ್ತನೆ ಎದ್ದು ನಿಂತ ಹಾವು ! 

Leave A Reply

Your email address will not be published.