Home » ಕುಂದಾಪುರ : ಅನಾರೋಗ್ಯಕ್ಕೊಳಗಾದ ಸಂಬಂಧಿಕರನ್ನು ನೋಡಿ ಮರಳುವಾಗ ಕಾರು ಡಿಕ್ಕಿಯಾಗಿ ವೃದ್ಧ ದಂಪತಿ ಸಾವು

ಕುಂದಾಪುರ : ಅನಾರೋಗ್ಯಕ್ಕೊಳಗಾದ ಸಂಬಂಧಿಕರನ್ನು ನೋಡಿ ಮರಳುವಾಗ ಕಾರು ಡಿಕ್ಕಿಯಾಗಿ ವೃದ್ಧ ದಂಪತಿ ಸಾವು

by ಕೆ. ಎಸ್. ರೂಪಾ
0 comments

ಕುಂದಾಪುರ : ಕಾರು ಡಿಕ್ಕಿಯಾಗಿ ವೃದ್ಧ ದಂಪತಿ ಸಾವನ್ನಪ್ಪಿದ್ದ ಘಟನೆಯೊಂದು ನಡೆದಿದೆ. ಈ ಘಟನೆ ಕುಂದಾಪುರದ ವಿನಾಯಕ ಚಿತ್ರಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿಗಳಾದ ಮಹಾಬಲ ಶೆಟ್ಟಿ (68) ಹಾಗೂ ಅವರ ಪತ್ನಿ ಸರೋಜಾ ಶೆಡ್ತಿ (60) ಸಾವನ್ನಪ್ಪಿದವರು. ಮೃತರು ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಬ್ರಹ್ಮಾವರಕ್ಕೆ ತೆರಳುವ ವೇಳೆ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಕಾರು ಅವರಿಬ್ಬರಿಗೆ ಡಿಕ್ಕಿ ಹೊಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸಂಬಂಧಿಕರನ್ನು ನೋಡಿ ವಾಪಾಸು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಿಕ್ಷಾದಲ್ಲಿ ಹೋಗಿ ಅಂದಾಗ ಇಲ್ಲ, ಬಸ್ಸಿನಲ್ಲೇ ತೆರಳುವುದಾಗಿ ಹೇಳಿದ್ದು, ಬಸ್ಸಿಗಾಗಿ ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಮಹಾಬಲ ಶೆಟ್ಟಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಸರೋಜಾ ಅವರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.

ಕಾರು ಚಾಲಕ ಮಂಜುನಾಥನ ವಿರುದ್ಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

banner

You may also like

Leave a Comment