Homeದಕ್ಷಿಣ ಕನ್ನಡಮಂಗಳೂರಿನ 'ಕರಾವಳಿ ಉತ್ಸವ' ಕ್ಕೆ ದಿನಾಂಕ ಫಿಕ್ಸ್ |

ಮಂಗಳೂರಿನ ‘ಕರಾವಳಿ ಉತ್ಸವ’ ಕ್ಕೆ ದಿನಾಂಕ ಫಿಕ್ಸ್ |

Hindu neighbor gifts plot of land

Hindu neighbour gifts land to Muslim journalist

ಕೊನೆಗೂ ಕರಾವಳಿ ಉತ್ಸವಕ್ಕೆ ದಿನಾಂಕ ಫಿಕ್ಸ್ ಆಗಿದ್ದು, ಕರಾವಳಿಗರ ಸಂತಸದ, ಸಡಗರದ ಸಂಭ್ರಮವು ಸನ್ನಿಹಿತವಾಗಿದೆ. ಮುಂದಿನ ಡಿಸೆಂಬರ್ 23 ರಿಂದ ಜನವರಿ 01 ರವರೆಗೆ ದಿನಾಂಕ ನಿಗದಿಯಾಗಿದ್ದು, ಮಂಗಳೂರು ನಗರದ ತಣ್ಣೀರು ಬಾವಿ ಕಡಲ ತಡಿಯಲ್ಲಿ ಕರಾವಳಿ ಉತ್ಸವ ನಡೆಯಲಿಕ್ಕಿದೆ.

ಇದಕ್ಕೆ ಅಗತ್ಯವಿರುವ ಉಪ ಸಮಿತಿಗಳ ರಚನೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ತಣ್ಣೀರುಬಾವಿಯಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗುವುದು, ಕದ್ರಿ ಪಾರ್ಕ್ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ಉಪ ವೇದಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಉತ್ಸವದಲ್ಲಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಬೀಚ್ ಉತ್ಸವ, ರಿವರ್ ಫೆಸ್ಟಿವಲ್ ಸೇರಿದಂತೆ ಹಲವು ಕಾರ್ಯಕ್ರಮಗಳ ರೂಪುರೇಷೆಗಳನ್ನು ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.

RELATED ARTICLES

Most Popular

Recent Comments