Home » ಕಡಬ : ಸರಕಾರಿ ಶಾಲೆಯ ಪೈಪ್ ಲೈನ್, ನಳ್ಳಿ,ಗೇಟಿಗೆ ಹಾನಿ : ದೈವದ ಮೊರೆ ಹೋದ ಶಾಲಾಭಿವೃದ್ದಿ ಸಮಿತಿ

ಕಡಬ : ಸರಕಾರಿ ಶಾಲೆಯ ಪೈಪ್ ಲೈನ್, ನಳ್ಳಿ,ಗೇಟಿಗೆ ಹಾನಿ : ದೈವದ ಮೊರೆ ಹೋದ ಶಾಲಾಭಿವೃದ್ದಿ ಸಮಿತಿ

by Praveen Chennavara
0 comments

ಕಡಬ: ಕೊಯಿಲ ಗ್ರಾಮದ ಕೊಯಿಲ ಕೆ ಸಿ ಫಾರ್ಮ್ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಕೃಷಿ ತೋಟಕ್ಕೆ ಮತ್ತು ಕುಡಿಯುವ ನೀರಿಗಾಗಿ ಅಳವಡಿಸಿದ ಪೈಪುಗಳಿಗೆ , ನಳ್ಳಿಗಳಿಗೆ, ಗೇಟಿನ ಸರಳುಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ ಎಂದು ಶಾಲಾಭಿವೃದ್ದಿ ಸಮಿತಿಯಿಂದ ಕಡಬ ಠಾಣೆಗೆ ದೂರು ನೀಡಲಾಗಿದೆ.

ಎರಡು ಕುಡಿಯುವ ನೀರಿನ ನಳ್ಳಿಗಳನ್ನು , ಮೂರು ಕಡೆ ಕೃಷಿ ತೋಟದ ಪೈಪುಗಳನ್ನು ಮುರಿಯಲಾಗಿದೆ. ಆವರಣಕ್ಕೆ ಪ್ರವೇಶಿಸುವ ಮುಖ್ಯ ದ್ವಾರದ ಗೇಟಿನ ಸರಳನ್ನು ಮುರಿದಿದ್ದಾರೆ. ಮಂಗಳವಾರ ರಾತ್ರಿ ಸಮಯದಲ್ಲಿ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಕೃಷಿ ತೋಟದ ಕೆಲಸ ಸಂಬಂದ ಬುಧವಾರ ಎಸ್ ಡಿ ಎಂ ಸಿ ಪದಾಧಿಕಾರಿಗಳು ಶಾಲಾ ಆವರಣಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಎಸ್ ಡಿ ಎಂ ಸಿ ಅಧ್ಯಕ್ಷ ವಿಶ್ವನಾಥ ಯಾನೆ ಶಶಿ ಕುಮಾರ್ ನೀಡಿರುವ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ದೈವಗಳಿಗೆ ಮೊರೆ

ಈ ಕೃತ್ಯದ ವಿರುದ್ದ ಶಾಲಾಭಿವೃದ್ದಿ ಸಮಿತಿ, ಪೋಷಕರಿಂದ ದೈವಗಳಿಗೆ ಮೊರೆಯಿಟ್ಟ ಬ್ಯಾನರ್ ಶಾಲಾ ಆವರಣದಲ್ಲಿ ಆಳವಡಿಸಲಾಗಿದೆ. ಈ ಕೃತ್ಯ ಎಸೆದವರಿಗೆ ಆತೂರು ಶ್ರೀ ದುಗಾಲಯಿ ದೈವ , ಬರಮೇಲು ಶ್ರೀ ಶಿರಾಡಿ ದೈವ, ನೆಹರುತೋಟ ಶ್ರೀ ಕೊರಗಜ್ಜ ದೈವಕ್ಕೆ ಹರಕೆ ಇಟ್ಟಿದ್ದೇವೆ ಎಂದು ಬ್ಯಾನರ್ ನಲ್ಲಿ ಉಲ್ಲೇಖಿಸಲಾಗಿದೆ.

banner

(ಕೃತ್ಯದ ವಿರುದ್ದ ಶಾಲಾಭಿವೃದ್ದಿ ಸಮಿತಿ, ಪೋಷಕರಿಂದ ದೈವಗಳಿಗೆ ಮೊರೆಯಿಟ್ಟ ಬ್ಯಾನರ್ ಶಾಲಾ ಆವರಣದಲ್ಲಿ ಆಳವಡಿಸಲಾಗಿದೆ.)

You may also like

Leave a Comment