Homeದಕ್ಷಿಣ ಕನ್ನಡಬೆಳ್ತಂಗಡಿ : ಬ್ಯಾಂಕ್ ಸಾಲ ಮರುಪಾವತಿ ಮಾಡದೆ ವಂಚಸಿದ್ದಕ್ಕಾಗಿ ವಿಘ್ನೇಶ್ ಸಿಟಿ ಕಟ್ಟಡ ನಾಳೆ ಜಪ್ತಿ...

ಬೆಳ್ತಂಗಡಿ : ಬ್ಯಾಂಕ್ ಸಾಲ ಮರುಪಾವತಿ ಮಾಡದೆ ವಂಚಸಿದ್ದಕ್ಕಾಗಿ ವಿಘ್ನೇಶ್ ಸಿಟಿ ಕಟ್ಟಡ ನಾಳೆ ಜಪ್ತಿ !! | ಬೀದಿಗೆ ಬಿದ್ದ ಕಟ್ಟಡದ 35 ಅಂಗಡಿ ಮಾಲೀಕರು

Hindu neighbor gifts plot of land

Hindu neighbour gifts land to Muslim journalist

ಕಟ್ಟಡ ನಿರ್ಮಾಣ ಮಾಡಲು ಬ್ಯಾಂಕ್ ನಿಂದ ಸಾಲ ಪಡೆದು ವಾಪಸ್ ನೀಡದೆ ವಂಚನೆ ಮಾಡಿದ್ದಕ್ಕಾಗಿ ಬೆಳ್ತಂಗಡಿಯ ಮಿನಿ ವಿಧಾನಸೌಧದ ಮುಂಭಾಗದ ವಿಘ್ನೇಶ್ ಸಿಟಿ ಕಟ್ಟಡವನ್ನು ಬ್ಯಾಂಕ್ ನಾಳೆ ಜಪ್ತಿ ಮಾಡಲಿದೆ ಎಂದು ವರದಿಯಾಗಿದೆ.

ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ , ವಿಘ್ನೇಶ್ ಸಿಟಿ ಎಂಬ ಹೆಸರಿನ ಕಟ್ಟಡಕ್ಕೆ, ವಿಘ್ನೇಶ್ ಕನ್ಸ್ಟ್ರಕ್ಟರ್ಸ್ PWD ಕಂಟ್ರ್ಯಾಕ್ಟರ್ & ಅರ್ಥ್ ಮೂವರ್ಸ್ ನಡೆಸುತ್ತಿರುವ ಬೆಳ್ತಂಗಡಿ ನಗರದ ಕಲ್ಲಗುಡ್ಡೆ ಬಳಿ ಇರುವ ರವಿ ಕುಮಾರ್ ಎಂಬವರು ಮುಂಬಯಿ ಮೂಲದ NKGSB Co-op ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಆದ್ರೆ ಕಳೆದ ನಾಲ್ಕು ವರ್ಷಗಳಿಂದ ಬಡ್ಡಿ, ಅಸಲು ಸೇರಿ ಸುಮಾರು ಆರುವರೇ ಕೋಟಿ ಹಣವನ್ನು ಬ್ಯಾಂಕ್ ಗೆ ಕಟ್ಟದೆ ವಂಚನೆ ಮಾಡಿದ್ದಾರೆ. ಇನ್ನೂ ಕಟ್ಟಡ ಬಿಡಲು ಎಲ್ಲಾ ಬಾಡಿಗೆ ಹೊಂದಿರುವ ಮಾಲಕರಿಗೆ ಮಂಗಳೂರು ಕೋರ್ಟ್ ಮುಖಾಂತರ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಹಚ್ಚಿ ಹೋಗಿದ್ದಾರೆ.

ಕೋರ್ಟ್ ಮುಖಾಂತರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೋರ್ಟ್ ಕಮಿಷನರ್ ಮುಖಾಂತರ ಜಪ್ತಿ ಮಾಡಲಿದ್ದೇವೆ. ನೀವಾಗಿ ಕೋಣೆಯನ್ನು ಖಾಲಿ ಮಾಡಿ, ಹೋಗಿ ಇಲ್ಲವಾದರೆ ನಾವೇ ಎಲ್ಲವನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗುತ್ತೇವೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಇನ್ನು ಈ ಕಟ್ಟಡದಲ್ಲಿ ಬೇರೆ ಬೇರೆ ವ್ಯಾವಹಾರ ಮಾಡಲು 35 ಕ್ಕೂ ಹೆಚ್ಚು ಅಂಗಡಿ ಕೋಣೆಗಳನ್ನು ಬಾಡಿಗೆ ಪಡೆದು ಕೊಂಡಿದ್ದು, ಇದೀಗ ಬ್ಯಾಂಕ್ ಜಪ್ತಿ ಮಾಡುವುದಾಗಿ ಬ್ಯಾಂಕ್ ನೋಟಿಸ್ ಎಲ್ಲರಿಗೂ ನೀಡಿರುವುದರಿಂದ ಡೆಪೋಸಿಟ್ ನೀಡಿದ ಹಣ ಕೂಡ ವಾಪಸ್ ಬರುವ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ ಅಂಗಡಿ ಮಾಲಕರು. ಈ ಕಟ್ಟಡದಲ್ಲಿ ನಾಲ್ಕು ಅಂಗಡಿ ಮಾತ್ರ ಓನರ್ ಶಿಪ್ ಗೆ ಲೋನ್ ಮಾಡುವ ಮೊದಲೇ ಪಡೆದುಕೊಂಡಿದ್ದು, ಅವರಿಗೆ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.

ಇನ್ನು ಬಾಡಿಗೆ ಪಡೆದ 35 ಕ್ಕೂ ಅಧಿಕ ಅಂಗಡಿ ಮಾಲಕರು ಬ್ಯಾಂಕ್ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು, ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಖಾಲಿ ಮಾಡಲೇಬೇಕು, ಬೇಕಾದರೆ ಹರಾಜು ಆಗುವ ವೇಳೆ ಓನರ್ ಶಿಪ್ ನಲ್ಲಿ ಪಡೆಯಬಹುದು ಎಂದು ತಿಳಿಸಿದ್ದಾರೆ. ಇನ್ನು ಕಟ್ಟಡದಲ್ಲಿರುವ ಹಲವು ಅಂಗಡಿ ಮಾಲಕರು ಈಗಾಗಲೇ ಬೇರೆಡೆ ತಮ್ಮ ಅಂಗಡಿಯನ್ನು ವಸ್ತು ಸಮೇತ ಸ್ಥಳಾಂತರ ಮಾಡುತ್ತಿರುವುದು ಕಂಡುಬರುತ್ತಿದೆ.

RELATED ARTICLES

Most Popular

Recent Comments