Home ದಕ್ಷಿಣ ಕನ್ನಡ ಬೆಳ್ತಂಗಡಿ :ತುಂಡಾಗಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆ ಸಿಲುಕಿ ಉಜಿರೆಯ ಹೋಟೆಲ್ ಉದ್ಯಮಿ ಮೃತ್ಯು

ಬೆಳ್ತಂಗಡಿ :ತುಂಡಾಗಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆ ಸಿಲುಕಿ ಉಜಿರೆಯ ಹೋಟೆಲ್ ಉದ್ಯಮಿ ಮೃತ್ಯು

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ : ತನ್ನ ಹೋಟೆಲ್ ನಲ್ಲಿ ಕೆಲಸಕ್ಕಿದ್ದ ವ್ಯಕ್ತಿಯನ್ನು ಅವರ ಮನೆಗೆ ಬಿಟ್ಟು ವಾಪಸ್ ಬರುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈಯರ್ ಕುತ್ತಿಗೆಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಹೋಟೆಲ್ ಉದ್ಯಮಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಹೆಡ್ಯಾದಲ್ಲಿ ಗುರುವಾರ ರಾತ್ರಿ ನಡೆದಿದೆ.

ಉಜಿರೆಯಲ್ಲಿ ಶ್ರೀ ಮಂಜುನಾಥ ಹೊಟೇಲ್ ನಡೆಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ರಘು ಎಂಬವರು ತನ್ನ ಕೆಲಸದ ವ್ಯಕ್ತಿಯನ್ನು ಮನೆಗೆ ಬಿಡಲು ಹೋಗಿದ್ದು ನಂತರ ವಾಪಸ್ ಬರುವ ವೇಳೆ ಹೆಡ್ಯಾದಲ್ಲಿ ಪಿಕಪ್ ವಾಹನ ವಿದ್ಯುತ್ ಕಂಬಕ್ಕೆ ಗುರುವಾರ ರಾತ್ರಿ ಡಿಕ್ಕಿ ಹೊಡೆದು ಐದು ವಿದ್ಯುತ್ ಕಂಬ ರಸ್ತೆಗೆ ಬಿದ್ದಿತ್ತು ಇದರ ಬಗ್ಗೆ ಅರಿಯದ ರಘು ರಾತ್ರಿ ಸುಮಾರು 11:30 ಕ್ಕೆ ವಿದ್ಯುತ್ ವೈಯರ್ ಗೆ ಕುತ್ತಿಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಹಾಗೂ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.