Home ಕಾಸರಗೋಡು ಹೆತ್ತವರನ್ನೇ ನಡುರಸ್ತೆಯಲ್ಲಿ ಕೊಂದ ಮಗ!! ಘಟನೆಯ ಬಳಿಕ ಪೊಲೀಸರಿಗೆ ಕರೆ ಮಾಡಿ ಪರಾರಿ -ಆರೋಪಿಯ ಪತ್ತೆಗಾಗಿ...

ಹೆತ್ತವರನ್ನೇ ನಡುರಸ್ತೆಯಲ್ಲಿ ಕೊಂದ ಮಗ!! ಘಟನೆಯ ಬಳಿಕ ಪೊಲೀಸರಿಗೆ ಕರೆ ಮಾಡಿ ಪರಾರಿ -ಆರೋಪಿಯ ಪತ್ತೆಗಾಗಿ ಮುಂದುವರಿದ ಶೋಧ

Hindu neighbor gifts plot of land

Hindu neighbour gifts land to Muslim journalist

ಹೆತ್ತ ತಂದೆ ತಾಯಿಯನ್ನು ಪಾಪಿ ಮಗನೊಬ್ಬ ನಡುರಸ್ತೆಯಲ್ಲಿಯೇ ಕೊಲೆ ಮಾಡಿರುವ ಘಟನೆಯೊಂದು ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.

ಆರೋಪಿ ಅನೀಶ್ ( 30 ) ಎಂಬಾತನೇ ಈ ಕೃತ್ಯ ಮಾಡಿ, ತಲೆಮರೆಸಿಕೊಂಡಿದ್ದಾನೆ.

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ತ್ರಿಶೂರ್ ಇಂಚಕುಂಡ್ ಮೂಲದ ಕುಟ್ಟನ್ ( 60) ಮತ್ತು ಪತ್ನಿ ಚಂದ್ರಿಕಾ ( 55) ಕೊಲೆಯಾದ ವ್ಯಕ್ತಿಗಳು.

ಕೌಟುಂಬಿಕ ಕಲಹ ಹಿನ್ನೆಲೆ ಹೆತ್ತವರನ್ನು ಮಗ ಅನೀಶ್ ಕೊಲೆಗೈದಿದ್ದಾನೆ.

ಇಂದು ಮನೆಮುಂದೆಯ ಹುಲ್ಲು ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಅನೀಶ್ ಚಾಕುವಿನಿಂದ ಕೊಲೆ ಮಾಡಿದ್ದಾನೆ. ನಂತರ ಸ್ವತಃ ಪೊಲೀಸರಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದಾನೆ. ಹಾಗೂ ಕೂಡಲೇ ಪರಾರಿಯಾಗಿದ್ದಾನೆ.