Chinnaswamy : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನುಮುಂದೆ ಆ 11 ಸೀಟುಗಳನ್ನು ಯಾರಿಗೂ ಮಾರಾಟ ಮಾಡಲ್ಲ. ಅಲ್ಲಿ ಯಾರೂ ಕೂರೋದಿಲ್ಲ. ಆದರೆ ಅದು ಕೇವಲ ಖಾಲಿ ಕುರ್ಚಿಗಳಲ್ಲ, ಅದು ಆರ್ಸಿಬಿಯು ಕಳೆದ ವರ್ಷ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡ ಜೀವಗಳಿಗೆ ಸಲ್ಲಿಸುತ್ತಿರುವ ‘ಸ್ಮರಣಾಂಜಲಿ’

ಯಸ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್ ಪಂದ್ಯ ನಡೆದರೂ ಕೂಡ ಬೇಗನೆ ಟಿಕೆಟ್ ಕಾಲಿಯಾಗಿ ಬಿಡುತ್ತದೆ. ಸಾವಿರಾರು ರೂಪಾಯಿ ಕೊಟ್ಟರೂ ಸೀಟು ಸಿಗಲ್ಲ. ಆದರೆ ಚಿನ್ನಸ್ವಾಮಿ ಸ್ಟೇಡಿಯಂನ ಒಂದು ನಿರ್ದಿಷ್ಟ ಗ್ಯಾಲರಿಯಲ್ಲಿ 11 ಸೀಟುಗಳನ್ನು ಹಾಗೆಯೇ ಬಿಡಲಾಗಿದೆ. ಅಲ್ಲಿ ಆರ್ಸಿಬಿ ತಂಡದ ಜೆರ್ಸಿಗಳನ್ನು ಹಾಕಿರಲಾಗಿರುತ್ತೆ ಅಥವಾ ಹೂವಿನ ಹಾರಗಳನ್ನು ಇಟ್ಟಿರುತ್ತಾರೆ. ಕ್ರಿಕೆಟ್ ಅಂದ್ರೆ ಪ್ರಾಣ ಬಿಡುತ್ತಿದ್ದ, ಆದರೆ ಇಂದು ನಮ್ಮೊಂದಿಗಿಲ್ಲದ ಆ 11 ಆತ್ಮಗಳಿಗಾಗಿ ಮೀಸಲಿಟ್ಟ ಜಾಗ.
ಹೀಗಾಗಿ ಇನ್ನು ಮುಂದೆ ಚಿನ್ನಸ್ವಾಮಿಯಲ್ಲಿ ನಡೆಯುವ ಪ್ರತಿಯೊಂದು ಪಂದ್ಯಕ್ಕೂ 11 ಸೀಟುಗಳನ್ನು ಮೀಸಲಿಡಲಾಗುವುದು ಹಾಗೂ ಈ 11 ಸೀಟುಗಳನ್ನು ಮಾರಾಟ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಸಂದರ್ಭದಲ್ಲಿಯೂ ಸಹ 11 ಸೀಟುಗಳನ್ನು ಮೃತರ ಹೆಸರಿನಲ್ಲಿ ಮೀಸಲಿಡಲಾಗುವುದು. ಜೊತೆಗೆ ಮುಖ್ಯ ದ್ವಾರದ ಭಾಗದಲ್ಲಿ ಬೋರ್ಡ್ ಅಳವಡಿಕೆ ಮಾಡಿ, ಅದರಲ್ಲಿ ಮೃತರ ಹೆಸರನ್ನ ನಮದು ಮಾಡಲಿದೆ.
ಇನ್ನು 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಕೆಎಸ್ಸಿಎ & ಆರ್ಸಿಬಿ ಮ್ಯಾನೇಜ್ಮೆಂಟ್ ಮೃತರಿಗೆ 1 ನಿಮಿಷ ಮೌನಚಾರಣೆ ಮಾಡಲಿದೆ.

