HomeKarnataka State Politics Updatesಯೋಗಿ ಆದಿತ್ಯನಾಥ್ ಗೆ ಬೆದರಿಕೆ ಹಾಕಿದ ಶಾಸಕ ಶಾಝಿಲ್ ಇಸ್ಲಾಂ ಪೆಟ್ರೋಲ್ ಬಂಕ್ ' ಬುಲ್ಡೋಜರ್'...

ಯೋಗಿ ಆದಿತ್ಯನಾಥ್ ಗೆ ಬೆದರಿಕೆ ಹಾಕಿದ ಶಾಸಕ ಶಾಝಿಲ್ ಇಸ್ಲಾಂ ಪೆಟ್ರೋಲ್ ಬಂಕ್ ‘ ಬುಲ್ಡೋಜರ್’ ನಿಂದ ನೆಲಸಮ!!!

Hindu neighbor gifts plot of land

Hindu neighbour gifts land to Muslim journalist

ಸೋಮವಾರ ಬರೇಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ,’ ಸಿಎಂ ಯೋಗಿ ಆದಿತ್ಯನಾಥ್ ಬಾಯಲ್ಲಿ ಇನ್ನೊಂದು ಮಾತು ಬಂದರೆ ನಮ್ಮ ಬಂದೂಕಿನಿಂದ ಹೊಗೆ ಬರುವುದಿಲ್ಲ. ಗುಂಡುಗಳು ಸಿಡಿಯುತ್ತವೆ’ ಎಂದು ಹೇಳಿಕೆಯನ್ನು ನೀಡಿದ ಸಮಾಜವಾದಿ ಪಕ್ಷದ ನಾಯಕನ ಪೆಟ್ರೋಲ್ ಬಂಕ್ ನ್ನು ಬುಲ್ಡೋಜರ್ ನಿಂದ ನಾಶ ಮಾಡಲಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತೀವ್ರವಾಗಿ ಟೀಕೆ ಮಾಡಿದ ಸಮಾಜವಾದಿ ಪಕ್ಷದ ಶಾಸಕನ ಪೆಟ್ರೋಲ್ ಬಂಕನ್ನು ಜಿಲ್ಲಾಡಳಿತ ಬುಲ್ಡೋಜರ್ ಮೂಲಕ ನಾಶ ಮಾಡಿದೆ.

ಸೋಮವಾರ ಸಮಾಜವಾದಿ ಪಕ್ಷದ ಶಾಸಕ ಶಾಝಿಲ್ ಇಸ್ಲಾಂ ಅನ್ಸಾರಿ ಎಂಬವರು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದದ್ದರು. ಇದಾದ ಮೂರೇ ದಿನಕ್ಕೆ ಅನ್ಸಾರಿ ಅವರ ಒಡೆತನದ ಪೆಟ್ರೋಲ್ ಬಂಕ್ ಅನ್ನು ಬುಲ್ಡೋಜರ್ ಮೂಲಕ ಜಿಲ್ಲಾಡಳಿತ ತೆರವು ಮಾಡಿದೆ.

ಅನ್ಸಾರಿ ಅವರ ಈ ವಿವಾದಿತ ಹೇಳಿಕೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಮಾಡಲಾಗಿತ್ತು. ಅನ್ಸಾರಿ ಹಾಗೂ ಇನ್ನು ಕೆಲವರ ಮೇಲೆ, ಶಾಂತಿ ಕದಡುವ ಯತ್ನ, ಪ್ರಚೋದನಕಾರಿ ಹೇಳಿಕೆ ನೀಡಿದ ಅರೋಪದ ಮೇಲೆ ಮೊಕದ್ದಮೆ ದಾಖಲು ಮಾಡಲಾಗಿತ್ತು.

ಇನ್ನು ಈ ವೀಡಿಯೋ ಕ್ಲಿಪ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಅನ್ಸಾರಿ, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ವೀಡಿಯೋಗೆ ಬೇರೆ ಆಡಿಯೋ ನಕಲು ಮಾಡಲಾಗಿದೆ ಎಂಬ ಪ್ರತಿಕ್ರಿಯೆ ನೀಡಿದ್ದಾರೆ.

RELATED ARTICLES

Most Popular

Recent Comments