HomeKarnataka State Politics Updatesಸಿದ್ದರಾಮಯ್ಯನ ಬೇಟೆಗೆ ಸೀಳುನಾಯಿಗಳು ಕಾಯುತ್ತಿವೆ !!

ಸಿದ್ದರಾಮಯ್ಯನ ಬೇಟೆಗೆ ಸೀಳುನಾಯಿಗಳು ಕಾಯುತ್ತಿವೆ !!

Hindu neighbor gifts plot of land

Hindu neighbour gifts land to Muslim journalist

ರಾಜಕೀಯದಲ್ಲಿ ಸದಾ ಕೆಸರೆರಚಾಟ ಇದ್ದದ್ದೇ. ಅದರಲ್ಲೂ ಚುನಾವಣೆ ಸಮೀಪಿಸುತ್ತಿದೆ ಎಂದರೆ ರಾಜಕೀಯ ನಾಯಕರುಗಳ ಹೇಳಿಕೆಗಳು ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತವೆ. ರಾಜ್ಯದಲ್ಲಿ ಇತ್ತೀಚೆಗೆ ಚಡ್ಡಿ ಸುಡುವ ಹೇಳಿಕೆಯಿಂದ ಸಿದ್ದರಾಮಯ್ಯ ಬಿಜೆಪಿ ನಾಯಕರ ಆಹಾರವಾಗಿದ್ದಾರೆ. ಅಂತೆಯೇ ಇದೀಗ ಸಿದ್ದರಾಮಯ್ಯರನ್ನು ಸಚಿವ ಮುನಿರತ್ನ ಕಟುವಾಗಿ ಟೀಕಿಸಿದ್ದಾರೆ.

‘ಸಿದ್ದರಾಮಯ್ಯ ಅವರನ್ನು ಬೇಟೆಯಾಡಲು ಪಕ್ಕದಲ್ಲೇ ಸೀಳುನಾಯಿಗಳು ಹೊಂಚು ಹಾಕಿ ಕಾಯುತ್ತಿವೆ. ಬರೀ ಸೀಳುನಾಯಿಗಳಲ್ಲ; ಅವರ ಸುತ್ತ ತಿಮಿಂಗಿಲ, ಹಾವು, ಮೊಸಳೆ, ಚೇಳು ಸುತ್ತುತ್ತಿವೆ. ಯಾವಾಗ ಸಿದ್ದರಾಮಯ್ಯ ಅವರಿಗೆ ಏನು ಮಾಡುತ್ತವೆಯೋ ಗೊತ್ತಿಲ್ಲ’ ಎಂದು ಸಚಿವ ಮುನಿರತ್ನ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮನ್ನು ಸೀಳುನಾಯಿ ಎನ್ನುತ್ತೀರಾ? ತುಸು ಎಚ್ಚರ ತಪ್ಪಿದರೆ ನಿಮ್ಮ ಸುತ್ತ ಇರುವ ಸೀಳುನಾಯಿಗಳು ನಿಮ್ಮನ್ನು ತಿಂದುಬಿಡುತ್ತವೆ. ಈ ಬಗ್ಗೆ ನೀವು ಎಚ್ಚರಿಕೆಯಿಂದ ಇರಬೇಕೇ ಹೊರತು ನಮ್ಮ ವಿರುದ್ಧ ಮಾತನಾಡಿ ಪ್ರಯೋಜನವಿಲ್ಲ’ ಎಂದು ಹರಿಹಾಯ್ದಿದ್ದಾರೆ.

RELATED ARTICLES

Most Popular

Recent Comments