Home Karnataka State Politics Updates Karnataka election commission: ಚುನಾವಣೆ ವೆಚ್ಚದ ವರದಿ ನೀಡದ ಶಾಸಕರನ್ನು ಅನರ್ಹ ಮಾಡುವ ಅಧಿಕಾರವಿದೆ: ಚುನಾವಣಾ...

Karnataka election commission: ಚುನಾವಣೆ ವೆಚ್ಚದ ವರದಿ ನೀಡದ ಶಾಸಕರನ್ನು ಅನರ್ಹ ಮಾಡುವ ಅಧಿಕಾರವಿದೆ: ಚುನಾವಣಾ ಆಯೋಗ

Karnataka election commission
Image source: Deccan Herlad

Hindu neighbor gifts plot of land

Hindu neighbour gifts land to Muslim journalist

Karnataka election commission: ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ (Election) ಪೂರ್ಣಗೊಂಡಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಿದೆ. ಸದ್ಯ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲಿದ್ದು ಯಾರಿಗುಂಟು ಯಾರಿಗಿಲ್ಲ ಎಂಬ ಗೇಮ್ ಶುರುವಾಗಿದೆ, ಇನ್ನೇನು ಮಾನ್ಯ ಮುಖ್ಯ ಮಂತ್ರಿಗಳ ನೇಮಕ ಆಗಲಿದೆ.

ಸದ್ಯ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಜೂನ್‌ 17ರೊಳಗಾಗಿ ಚುನಾವಣಾ ವೆಚ್ಚದ ವಿವರವನ್ನು ಸಲ್ಲಿಸದಿದ್ದರೆ ಶಾಸಕರಾಗಿ ಆಯ್ಕೆಯಾದವರು ತಮ್ಮ ಸ್ಥಾನದಿಂದ ಪದಚ್ಯುತರಾಗಲಿದ್ದು, ಸೋತ ಅಭ್ಯರ್ಥಿಗಳು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಮುಖ್ಯವಾಗಿ ಚುನಾವಣಾ ಆಯೋಗ(Karnataka election commission) ವಿಧಾನಸಭೆ ಚುನಾವಣೆ(Karnataka assembly election 2023)ಯಲ್ಲಿ ಪ್ರತಿ ಅಭ್ಯರ್ಥಿಯ ವೆಚ್ಚದ ಮಿತಿಯನ್ನು 40 ಲಕ್ಷ ರೂಗೆ ನಿಗದಿ ಮಾಡಿದ್ದು, ಆ ಮೊತ್ತದಲ್ಲಿಯೇ ಚುನಾವಣಾ ರ್ಯಾಲಿ, ಸಮಾವೇಶ, ಪ್ರಚಾರ ಸಾಮಗ್ರಿ, ಪ್ರಚಾರ ಸೇರಿ ಇನ್ನಿತರ ವೆಚ್ಚವನ್ನು ನಿಗದಿಪಡಿಸಿದ ಮಿತಿಯಲ್ಲೇ ಮಾಡಬೇಕಾಗುತ್ತದೆ. ಈ ವೆಚ್ಚಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.

ಚುನಾವಣಾ ಆಯೋಗದ ನಿಯಮದಂತೆ ಮತದಾನವಾದ ನಂತರದ ಅಭ್ಯರ್ಥಿಗಳು 37 ದಿನಗಳಲ್ಲಿ ಅಂದರೆ ಜೂನ್‌ 17ರೊಳಗೆ ಚುನಾವಣಾ ಖರ್ಚಿನ ಮಾಹಿತಿ ಕೊಡಬೇಕಿದೆ. ಅದಕ್ಕೂ ಮುನ್ನ ಚುನಾವಣೆಗೆ ನಾಮಪತ್ರ ಸಲ್ಲಿಸಿದವರು ಪ್ರತಿ ದಿನದ ಖರ್ಚನ್ನು ಖರ್ಚು ವೆಚ್ಚ ಮೇಲ್ವಿಚಾರಣಾ ಅಧಿಕಾರಿಗಳಿಗೆ ನೀಡಬೇಕು. ಅದನ್ನು ಮಾಡದಿದ್ದರೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ.

ಅಲ್ಲದೆ, ಚುನಾವಣೆಯ ಖರ್ಚಿನ ಕುರಿತ ಮಾಹಿತಿಯನ್ನು ನೀಡಲು ವಿಫಲರಾದ ಅಭ್ಯರ್ಥಿಗಳ ವಿರುದ್ಧವೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬಹುದಾಗಿದೆ. ಒಂದು ವೇಳೆ ಲೆಕ್ಕ ಕೊಡಲು ವಿಫಲರಾದವರು ಅಥವಾ ನಿಗದಿತ 40 ಲಕ್ಷ ರೂಗಿಂತ ಹೆಚ್ಚಿನ ಮೊತ್ತ ವ್ಯಯಿಸಿದ್ದವರು ಶಾಸಕರಾಗಿ ಆಯ್ಕೆಯಾಗಿದ್ದರೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು.

ಚುನಾವಣಾ ವೆಚ್ಚದ ಪಟ್ಟಿಸಲ್ಲಿಸುವ ಕುರಿತಂತೆ ಬೆಂಗಳೂರು ಚುನಾವಣಾ ವಿಭಾಗ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಲ್ಲ 389 ಅಭ್ಯರ್ಥಿಗಳಿಗೆ ಜೂನ್‌ 6ರಂದು ತರಬೇತಿ ನೀಡಲಿದೆ. ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಖರ್ಚು-ವೆಚ್ಚ ಮೇಲ್ವಿಚಾರಣಾ ಅಧಿಕಾರಿ ಸೇರಿ ಇನ್ನಿತರರು ತರಬೇತಿ ನೀಡಲಿದ್ದಾರೆ. ಪ್ರತಿ ಕ್ಷೇತ್ರದ ಅಭ್ಯರ್ಥಿಗೂ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತಿದೆ.

ಇದಾದ ನಂತರ ಜೂನ್‌ 8ರಂದು ಕ್ಷೇತ್ರವಾರು ಖರ್ಚು-ವೆಚ್ಚ ಮೇಲ್ವಿಚಾರಣಾ ಅಧಿಕಾರಿಗಳು ತಾವು ಸಿದ್ಧಪಡಿಸಿದ ಅಭ್ಯರ್ಥಿಗಳ ಖರ್ಚಿನ ಕುರಿತ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಅಭ್ಯರ್ಥಿಗಳು ನೀಡುವ ಖರ್ಚಿನ ಪಟ್ಟಿಮತ್ತು ಖರ್ಚು-ವೆಚ್ಚ ಮೇಲ್ವಿಚಾರಣಾ ಅಧಿಕಾರಿಗಳು ಸಿದ್ಧಪಡಿಸಿರುವ ಪಟ್ಟಿಯನ್ನು ತಾಳೆ ಮಾಡಲಿದ್ದಾರೆ.

ತುಷಾರ್‌ ಗಿರಿನಾಥ್‌, ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಜೂನ್‌ 17ರೊಳಗೆ ಎಲ್ಲರೂ ಚುನಾವಣಾ ವೆಚ್ಚದ ವರದಿ ನೀಡದಿದ್ದರೆ, ಮತ್ತು ನಿಗದಿಗಿಂತ ಹೆಚ್ಚಿನ ವೆಚ್ಚ ಮಾಡುವ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಶಾಸಕರಾಗಿದ್ದರೆ ಅವರ ಸ್ಥಾನದಿಂದ ವಜಾ ಮಾಡುವ ಅಧಿಕಾರವಿದೆ ಎಂದು ಆದೇಶ ನೀಡಿದ್ದಾರೆ.

ಇದನ್ನೂ ಓದಿ:ವಿವಾದಿತ ಮಹಿಳಾ ಪೊಲೀಸ್ ಅಧಿಕಾರಿ ರಸ್ತೆ ಅಪಘಾತದಲ್ಲಿ ಸಾವು