Home Karnataka State Politics Updates Director Kaviraj Post: ಬಿಜೆಪಿ ಸೋಲಿಗೆ ನಿರ್ದೇಶಕ, ಚಿತ್ರಸಾಹಿತಿ ಕವಿರಾಜ್ ಪೋಸ್ಟ್ ; ಸಖತ್...

Director Kaviraj Post: ಬಿಜೆಪಿ ಸೋಲಿಗೆ ನಿರ್ದೇಶಕ, ಚಿತ್ರಸಾಹಿತಿ ಕವಿರಾಜ್ ಪೋಸ್ಟ್ ; ಸಖತ್ ವೈರಲ್ ಆಯ್ತು!!

Director Kaviraj Post
Image Source: cinema express

Hindu neighbor gifts plot of land

Hindu neighbour gifts land to Muslim journalist

Director Kaviraj Post: ಈ ಬಾರಿಯ ಚುನಾವಣೆಯಲ್ಲಿ (Karnataka election) ಕಾಂಗ್ರೇಸ್ ಬಹುಮತ ಪಡೆದು ಗೆಲುವು ಕಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ (congress) ಗೆಲುವಿನ ನಗೆ ಬೀರಿದರೆ, ಬಿಜೆಪಿ ಹೀನಾಯ ಸೋಲು ಕಂಡು ಸುಮ್ಮನಾಗಿದೆ. ಇನ್ನು ಬಿಜೆಪಿ ಸೋಲಿನ ಬಗ್ಗೆ ಸಿನಿಮಾ ನಿರ್ದೇಶಕ, ಚಿತ್ರ ಸಾಹಿತಿ ಕವಿರಾಜ್ ಪೋಸ್ಟ್ (Director Kaviraj Post) ಹಂಚಿಕೊಂಡಿದ್ದು, ಸದ್ಯ ಸಖತ್ ವೈರಲ್ ಆಗುತ್ತಿದೆ.

ಕವಿರಾಜ್ ಪೋಸ್ಟ್ ಹೀಗಿದೆ ನೋಡಿ- ಬಿಜೆಪಿ ಸೋಲಿಗೆ ಕಾರಣ ಏನಂದ್ರೆ, ಮತ್ತೆ ಮತ್ತೆ ನಾಡಿನ ಶಾಂತಿ ಕದಡಿದ್ದು, ಕುವೆಂಪು , ಬಸವಣ್ಣ, ಅಂಬೇಡ್ಕರ್ ರಂತಹ ಮಹನೀಯರನ್ನು ಅವಮಾನಿಸಿದ್ದಲ್ಲದೆ, ಈ ಮಣ್ಣಿನ ಹೋರಾಟಗಾರರನ್ನು ಕಡೆಗಣಿಸಿದರು. ಶಾಲೆಯ ಪಠ್ಯಪುಸ್ತಕಗಳಲ್ಲೂ ರಾಜಕೀಯ ತಂದು ಬಿಟ್ಟರು. ಧರ್ಮ – ದೇವರು ಎಲ್ಲವನ್ನು ರಾಜಕೀಯ ಅಸ್ತ್ರವಾಗಿಸಿಕೊಂಡರು. ಕನ್ನಡತನ, ಕನ್ನಡದ ಆಸ್ಮಿತೆಗಳ ವಿರುದ್ಧ ನಿಂತಿದ್ದು, ಹಿಂದಿ ಹೇರಿಕೆ ಬೆಂಬಲಿಸಿದರು. ಸುಖಾ-ಸುಮ್ಮನೆ ಹಿಜಾಬ್ ವಿವಾದಗಳು.

ನಾಗಪುರ ನಿರ್ದೇಶಿತ ಮೂಲಭೂತವಾದದ ಪ್ರಯೋಗಗಳಿಗೆ ಕರ್ನಾಟಕವನ್ನು ಪ್ರಯೋಗಶಾಲೆಯಾಗಿಸಿದ್ದು, ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಂತ ಅನೈತಿಕ ರಾಜಕಾರಣದಿಂದ ರಾಷ್ಟ್ರಮಟ್ಟದಲ್ಲಿ ನಾಡಿನ ಗೌರವ ಹಾಳುಮಾಡಿದೆ. ವಿರೋಧ ಪಕ್ಷ, ವಿರೋಧಿಸಿದವರನ್ನು ಹೆದರಿಸಲು, ತಮ್ಮ ಮುಂದಿನ ಗೆಲುವಿಗಾಗಿ, ಆಡಳಿತ ವ್ಯವಸ್ಥೆಯನ್ನು ಯಥೆಚ್ಛವಾಗಿ ಬಳಸಿಕೊಂಡಿದ್ದಾರೆ.

ಭ್ರಷ್ಟಾಚಾರ ತುಂಬಿದ ಅಹಂಕಾರದ ಅಡಳಿತ, ಬಡಜನರ ಬದುಕಿನ ಜೊತೆಗೆ ಆಟವಾಡಿದರು. ದಿನಬಳಕೆಯ ವಸ್ತುಗಳಲ್ಲಿ ಏರಿಕೆ ತಂದು ಬಿಟ್ಟರು. ತಪ್ಪು ನಿರ್ಧಾರಗಳಿಂದ ಜನರ ದೂಷಣೆಗೆ ಕಾರಣರಾದರು.
ಅಲ್ಲದೆ, ಕರೋನಾದಂತಹ ಗಂಭೀರ ಸಮಯದಲ್ಲಿ ಜೀವಗಳನ್ನು ರಕ್ಷಿಸುವಲ್ಲಿ ಹೊಣೆಗೇಡಿತನ ತೋರಿದ್ದು, ಅದೆಷ್ಟೋ ಜೀವಗಳು ಈ ವೇಳೆ ಬಲಿಯಾಗಿವೆ. ಅಮಾಯಕ ಯುವಕರ ಹೆಣಗಳನ್ನು ರಾಜಕೀಯಕ್ಕೆ ಬಳಸಿಕೊಂಡಿದೆ. ಅಮಾಯಕರು ಸತ್ತರೆ ಅದನ್ನೇ ದಾಳವಾಗಿಟ್ಟುಕೊಂಡಿದೆ.

ಆದರೆ, ಮತದಾರರು ಇವೆಲ್ಲವನ್ನೂ ಅರಿತಿದ್ದಾರೆ. ಹಾಗಾಗಿ ಈ ಬಾರಿ ಸರ್ಕಾರವನ್ನೇ ಬದಲಾಯಿಸಿದ್ದಾರೆ. ಪ್ರತಿಯೊಬ್ಬನ ಮತದಾನದಲ್ಲಿದೆ ಸರ್ಕಾರದ ರಚನೆ. ಕೇಂದ್ರ ನಾಯಕರ ಅಬ್ಬರದ ರ್‍ಯಾಲಿಯಿಂದ ಅಲೆ ಸೃಷ್ಟಿಯಾಗಿಬಿಡುತ್ತೆ ಎಂಬ ಭ್ರಮೆಯಲ್ಲಿ ಇದ್ದವರಿಗೆ ಎಲ್ಲವೂ ಉಲ್ಟಾ ಹೊಡೆದಿದೆ. ಹಣ ಬಲದ ಧಿಮಾಕು , ಜಾತಿ ರಾಜಕೀಯ , ದ್ವೇಷ ಭಾಷಣ ಇವಕ್ಕೆಲ್ಲಾ ಸೊಪ್ಪು ಹಾಕದ ಕರುನಾಡಿನ ಮತದಾರರ ಪ್ರಜ್ಞಾವಂತಿಕೆ ಬಗ್ಗೆ ಹೆಮ್ಮೆಯೆನಿಸುತ್ತದೆ. ಈ ಬಾರಿ ಮತದಾರರು ನಿರ್ಣಾಯಕ ಫಲಿತಾಂಶ ನೀಡಿ ಯಾರ್ಯಾರು ಎಲ್ಲಿರಬೇಕು ಎಂದು ಖಚಿತವಾಗಿ ತೋರಿಸಿದ್ದಾರೆ. ಮತದಾರರ ಪ್ರಜ್ಞಾವಂತಿಕೆ ಮತ್ತು ಪ್ರಜಾಪ್ರಭುತ್ವ ಹೀಗೆ ಪ್ರಬುದ್ಧವಾಗುತ್ತ ಚಿರಾಯುವಾಗಲಿ ಎಂದು ಕವಿರಾಜ್ ಬರೆದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Karnataka election: ಎಲ್ಲಾ 224 ಕ್ಷೇತ್ರಗಳ ಗೆಲುವು ಸೋಲುಗಳ ಕಂಪ್ಲೀಟ್ ಅಂಕಿ ಅಂಶ, ಚುನಾವಣಾ ಆಯೋಗದಿಂದ ಫಲಿತಾಂಶ !