Maharastra : ರೈತಾಪಿ ವರ್ಗಕ್ಕೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಹೊರಡಿಸಿದ್ದಾರೆ. ಹಾಗಂತ ಇದು ನಮ್ಮ ಕರ್ನಾಟಕ ಸರ್ಕಾರವು ಹೊರಡಿಸಿರುವ ಘೋಷಣೆಯಲ್ಲ. ಬದಲಿಗೆ ನಮ್ಮ ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಅಲ್ಲಿನ ಸಮ್ಮಿಶ್ರ ಸರ್ಕಾರವು ತನ್ನ ರೈತರಿಗೆ ಸಿಹಿ ಸುದ್ದಿ ನೀಡಿದೆ.

ಹೌದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ಬಜೆಟ್ ಮಂಡಿಸಿದ್ದು, ರಾಜ್ಯ ಬಜೆಟ್ನಲ್ಲಿ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಈ ಕುರಿತಾಗಿ ಪ್ರಕ್ರಿಯೆಯನ್ನು ಜಾರಿಗೊಳಿಸಲು ಸರ್ಕಾರವು ವಿಶೇಷ ಸಮಿತಿಯನ್ನು ರಚಿಸಿದೆ.
ಮುಖ್ಯಮಂತ್ರಿಗಳ ಘೋಷಣೆಯ ಪ್ರಕಾರ ಸೆಪ್ಟೆಂಬರ್ 30, 2025 ರವರೆಗೆ ಬೆಳೆ ಸಾಲ ಬಾಕಿ ಉಳಿಸಿಕೊಂಡಿರುವ ರೈತರಿಗೆ ಈ ಯೋಜನೆಯಡಿ 2 ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ ಸೌಲಭ್ಯ ಸಿಗಲಿದೆ. ಸಾಲ ಮರುಪಾವತಿ ಮಾಡಲಾಗದೆ ಬಾಕಿ (Arrears) ಉಳಿಸಿಕೊಂಡಿರುವ ರೈತರು ಈ ಯೋಜನೆಯ ನೇರ ಲಾಭ ಪಡೆಯಲಿದ್ದಾರೆ.
ಇಷ್ಟು ಮಾತ್ರವಲ್ಲದೆ ಶಿಸ್ತಿನಿಂದ ಸಾಲ ಮರುಪಾವತಿ ಮಾಡುವ ರೈತರಿಗೂ ಮನ್ನಣೆ ನೀಡಲಾಗಿದೆ. ಸಾಲ ಪಡೆದು ಅದನ್ನು ನಿಯಮಿತವಾಗಿ ಮರುಪಾವತಿಸುವ ಅರ್ಹ ರೈತರಿಗೆ 50,000 ರೂಪಾಯಿ ವರೆಗೆ ಪ್ರೋತ್ಸಾಹಕ ಧನ (Incentive benefits) ನೀಡುವುದಾಗಿ ಘೋಷಿಸಲಾಗಿದೆ.

