Home » ಪುತ್ತೂರು: ಚೆನ್ನರಾಯಪಟ್ಟಣ ಬಳಿ ಪುತ್ತೂರು ಮೂಲದ ಯುವಕ ಬಿದ್ದು ಸಾವು

ಪುತ್ತೂರು: ಚೆನ್ನರಾಯಪಟ್ಟಣ ಬಳಿ ಪುತ್ತೂರು ಮೂಲದ ಯುವಕ ಬಿದ್ದು ಸಾವು

0 comments

ಪುತ್ತೂರು: ಪುತ್ತೂರು ಮೂಲದ ಯುವಕನೋರ್ವ ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿರುವ ಕುರಿತು ವರದಿಯಾಗಿದೆ.

ಮೃತರನ್ನು ಪುಣಚ ಗ್ರಾಮದ ದೇವಿನಗರ ನಿವಾಸಿ ನಿಶಿತ್‌ ನಾಯ್ಕ್‌ (25) ಎಂದು ಗುರುತಿಸಲಾಗಿದೆ.

ನಿಶಿತ್‌ರವರು ಬೆಂಗಳೂರಿನ ಕಲ್ಯಾಣ್‌ ಜ್ಯುವೆಲ್ಲರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಊರಿಗೆ ರೈಲಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

You may also like