Home » ಕಂದಕಕ್ಕೆ ಉರುಳಿದ ಕಾರು: ಮಂಗಳೂರು ಮೂಲದ ಯುವಕ ಸಾವು

ಕಂದಕಕ್ಕೆ ಉರುಳಿದ ಕಾರು: ಮಂಗಳೂರು ಮೂಲದ ಯುವಕ ಸಾವು

0 comments

ಕೊಟ್ಟಾಯಂ: ಕೊಟ್ಟಾಯಂನ ಕರುಕಾಚಲದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ಈ ಘಟನೆಯಲ್ಲಿ ಮಂಗಳೂರು ಮೂಲದ ಯುವಕ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮೃತರನ್ನು ಮೂಲತಃ ಮುಲ್ಕಿ ತಾಲೂಕಿನ ಅಂಗರಗುಡ್ಡೆ ನಿವಾಸಿ, ಪ್ರಸಕ್ತ ಕಾನದ ಚಿರಾಗ್‌ ಫ್ಲ್ಯಾಟ್‌ನಲ್ಲಿ ವಾಸವಿದ್ದ ಶಾನವಾಝ್‌ ಯಾನೆ ಶಮೀಮ್‌ (32) ಎಂದು ಗುರುತಿಸಲಾಗಿದೆ. ಇವರ ಜೊತೆ ಕಾರಿನಲ್ಲಿದ್ದ ಕಾಟಿಪಳ್ಳದ ಸಿರಾಜ್‌, ಕಾನ ನಿವಾಸಿ ಅಶ್ನಾಕ್‌, ಸೂರಿಂಜೆ ನಿವಾಸಿ ಶಬೀರ್‌ ಹಾಗೂ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ಗಾಯಾಳುಗಳ ಪೈಕಿ ಸಿರಾಜ್‌ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

You may also like