Kasaragodu: ಏಕೈಕ ಮಗನ ಅಗಲಿಕೆಯನ್ನು ಸಹಿಸಲಾರದೆ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯಲ್ಲಿ ಕರುಣಾಜನಕ ಘಟನೆಯೊಂದು ನಡೆದಿದೆ.

ಮೃತರನ್ನು ಹೆಸರಾಂತ ಉದ್ಯಮಿ ಪರಂಬದ ವೇಣುಗೋಪಾಲನ್ ನಾಯರ್ (50) ಮತ್ತು ಅವರ ಪತ್ನಿ ಸ್ಮಿತಾ (42) ಎಂದು ಗುರುತಿಸಲಾಗಿದೆ. ಸ್ಥಳೀಯರು ಮತ್ತು ಕುಟುಂಬ ಅವರಿಗೆ ಸಮಾಲೋಚನೆ (Counselling) ನೀಡಲು ಪ್ರಯತ್ನಿಸಿತ್ತು. ಪ್ರತಿದಿನ ರಾತ್ರಿ ಒಬ್ಬ ಸಂಬಂಧಿಕರು ಅವರ ಮನೆಯಲ್ಲಿ ಉಳಿಯುತ್ತಿದ್ದರು. ಆದರೆ, ಗುರುವಾರ ರಾತ್ರಿ ದಂಪತಿಗಳು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಈ ಕೃತ್ಯ ನಡೆದಿದೆ
ಕಳೆದ ಡಿಸೆಂಬರ್ 29ರಂದು ಬೇಕಲ್ ಬೀಚ್ ಉತ್ಸವದ ಸಂದರ್ಭದಲ್ಲಿ ನಡೆದ ರೈಲು ಅಪಘಾತದಲ್ಲಿ ಇವರ ಏಕೈಕ ಪುತ್ರ, ಮಂಗಳೂರಿನ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಎಂ. ಶಿವಾನಂದನ್ (19) ಮೃತಪಟ್ಟಿದ್ದರು. ರ್ಯಾಪರ್ ವೇದನ್ ಅವರ ಸಂಗೀತ ಕಚೇರಿಗೆ ಹೋಗುವ ಸಲುವಾಗಿ ರೈಲ್ವೆ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಶಿವಾನಂದನ್ ಅವರಿಗೆ ಡಿಕ್ಕಿ ಹೊಡೆದಿತ್ತು. ಇದೀಗ ತಮ್ಮ ಏಕೈಕ ಮಗನ ಅಕಾಲಿಕ ನಿಧನದ ಆಘಾತದಿಂದ ಹೊರಬರಲಾಗದ ದಂಪತಿಗಳಿಬ್ಬರು ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ಚೆಮ್ನಾಡ್ ಪಂಚಾಯತ್ನ ಪೊಯಿನಾಚಿಯಲ್ಲಿ ನಡೆದಿದೆ.
