Home » ಬೀದಿ ನಾಯಿ ಕಚ್ಚಿದ್ದು, ರೇಬಿಸ್‌ಗೆ ಹೆದರಿ ಬ್ಯಾಂಕ್‌ ನೌಕರ ಆತ್ಮಹತ್ಯೆ

ಬೀದಿ ನಾಯಿ ಕಚ್ಚಿದ್ದು, ರೇಬಿಸ್‌ಗೆ ಹೆದರಿ ಬ್ಯಾಂಕ್‌ ನೌಕರ ಆತ್ಮಹತ್ಯೆ

0 comments

ನಾಯಿ ಕಚ್ಚಿದ್ದಕ್ಕೆ ರೇಬಿಸ್‌ ಬರಬಹುದೆಂದು ಹೆದರಿ ಬ್ಯಾಂಕ್‌ ನೌಕರನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ನಡೆದಿದೆ. ಆಯುಷ್‌ ವಿಶ್ವನಾಥ್‌ ಅಮೀನ್‌ (30 ವ) ಮೃತ ಯುವಕ.

ಕಲ್ಯಾಣ್‌ ಪೂರ್ವದ ಟಿಸ್ಗಾಂವ್‌ ನಾಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತಮ್ಮ ಕುಟುಂಬದ ಜೊತೆ ವಾಸ ಮಾಡುತ್ತಿದ್ದ ವಿಶ್ವನಾಥ್‌ ಅಮೀನ್‌ ಕಳೆದ ಎಂಟು ವರ್ಷಗಳಿಂದ ಭಾರತ್‌ ಬ್ಯಾಂಕಿನ ಥಾಣೆ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ಅಮೀನ್‌ ಅವರಿಗೆ ಕಳೆದ ಕೆಲವು ದಿನಗಳ ಹಿಂದೆ ಬೀದಿ ನಾಯಿ ಕಚ್ಚಿತ್ತು. ಈ ಘಟನೆಯ ನಂತರ ಅವರು ಒಂದು ರೇಬಿಸ್‌ ನಿರೋಧಕ ಇಂಜೆಕ್ಷನ್‌ ತೆಗೆದುಕೊಂಡಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಅವರ ನಡವಳಿಕೆಯಲ್ಲಿ ಅಸಾಮಾನ್ಯ ಬದಲಾವಣೆಗಳನ್ನು ಕುಟುಂಬದವರು ಗಮನಿಸಿದ್ದು, ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಘಟನಾ ಸ್ಥಳದಲ್ಲಿಂದ ಡೆತ್‌ನೋಟ್‌ ವಶಪಡಿಸಿದ್ದು, ಅದರಲ್ಲಿ ರೇಬಿಸ್‌ ಲಕ್ಷಣಗಳು ಕಾಣಿಸಿಕೊಂಡ ಕುರಿತು ಬರೆದಿದ್ದರು.

banner

You may also like