Home » ಶಿವಮೊಗ್ಗ: 30 ಪ್ರಯಾಣಿಕರಿದ್ದ ಬಸ್‌ ಭೀಕರ ಅಪಘಾತ, ಬ್ರಿಡ್ಜ್‌ನಿಂದ ಉರುಳಿದ ಬಸ್ಸು

ಶಿವಮೊಗ್ಗ: 30 ಪ್ರಯಾಣಿಕರಿದ್ದ ಬಸ್‌ ಭೀಕರ ಅಪಘಾತ, ಬ್ರಿಡ್ಜ್‌ನಿಂದ ಉರುಳಿದ ಬಸ್ಸು

0 comments

ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆಹಳ್ಳ ಗ್ರಾಮದಲ್ಲಿ ಇಂದು ಭೀಕರ ಅಪಘಾತ ನಡೆದಿದೆ. ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಬರುತ್ತಿದ್ದ ʼಶ್ರೀ ರೇಣುಕಾಂಬʼ ಹೆಸರಿನ ಖಾಸಗಿ ಬಸ್‌ ಕಾಗೆಹಳ್ಳ ಗ್ರಾಮದ ಸಮೀಪವಿರುವ ಹಳ್ಳಕ್ಕೆ ಬಿದ್ದಿದೆ. ಬಸ್‌ ಚಲಿಸುತ್ತಿದ್ದ ವೇಳೆಯೇ ಈ ಅವಘಡ ನಡೆದಿದ್ದು, ಹಳ್ಳಕ್ಕೆ ಬಸ್‌ ಬಿದ್ದು ಜಖಂಗೊಂಡಿದೆ.

ಅಪಘಾತದ ಸಮಯದಲ್ಲಿ 30 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಬಸ್ಸಿನಲ್ಲಿದ್ದು, ಈ ಪೈಕಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಗಾಯಗೊಂಡವರನ್ನು ಕೂಡಲೇ ಸ್ಥಳೀಯರ ನೆರವಿನೊಂದಿಗೆ ಭದ್ರಾವತಿಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸ್‌ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲಕನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಪ್ರಯಾಣಿಕರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

banner

You may also like