ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಎಪ್ರಿಲ್ 25 ರಂದು ನಡೆದಿದೆ. ಮದುವೆ ಮೆರವಣಿಗೆಯ ಡಿಜೆ ಸದ್ದಿಗೆ ಕೋಳಿಗಳು ಸಾವನ್ನಪ್ಪಿರುವುದಾಗಿ ಆರೋಪಿಸಿ ಫಾರಂ ಮಾಲೀಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.


ಕುದ್ವಾರ ಪ್ರದೇಶದ ರಾಮ್ ಭದ್ರ ಪೂರ್ವದಿಂದ ಬಂದ ಬಬ್ಬನ್ ವಿಶ್ವಕರ್ಮ ಅವರ ಮಗಳ ವಿವಾಹ ಮೆರವಣಿಗೆಯು ಸಬೀರ್ ಅಲಿ ಅವರ ಕೋಳಿ ಸಾಕಣೆ ಕೇಂದ್ರದ ಮೂಲಕ ಸಾಗಿತ್ತು. ರಾತ್ರಿ 9.30 ರ ಸುಮಾರಿಗೆ ಡಿಜೆಯ ಡೆಸಿಬಲ್ ಶಬ್ದವು ಕೋಳಿಗಳಲ್ಲಿ ತೀವ್ರ ಭಯವನ್ನುಂಟು ಮಾಡಿತ್ತು. ಈ ತೀವ್ರ ಶಬ್ದವನ್ನು ತಡೆದುಕೊಳ್ಳಲಾರದೆ ಸಬೀರ್ ಅಲಿ ಅವರ ಫಾರಂನಲ್ಲಿದ್ದ 140ಕೋಳಿಗಳು ಮೃತಪಟ್ಟಿದೆ.
ಸಬೀರ್ ಅಲಿ ಅವರು ನೀಡಿದ ದೂರಿನ ಮೇರೆಗೆ, ಪೊಲೀಸರು ಮಂಗಳವಾರ ರಾತ್ರಿ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ಮಂಗಳವಾರ ರಾತ್ರಿ ಪಾರ್ಸಿಪುರದ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಡಿಜೆ ಅಥವಾ ಮದುವೆಯನ್ನು ಆಯೋಜಿಸಿದ್ದ ಕುಟುಂಬದಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ತಜ್ಞರ ಪ್ರಕಾರ, ಹೆಚ್ಚಿನ ತೀವ್ರತೆಯ ಧ್ವನಿ ತರಂಗಗಳು ಪಕ್ಷಿಗಳು ಮತ್ತು ಪ್ರಾಣಿಗಳಲ್ಲಿ ತೀವ್ರ ಒತ್ತಡದ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಇದು ಕೆಲವೊಮ್ಮೆ ಅವುಗಳಲ್ಲಿ ಹೃದಯ ಸ್ತಂಭನಕ್ಕೂ ಕಾರಣವಾಗಬಹುದು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾದಂತಿದೆ.

