Home Accident ಮಂಗಳೂರು: ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಬೈಕ್‌ ಗೆ ಕಾರು ಡಿಕ್ಕಿ, ಇಬ್ಬರು ಗಂಭೀರ, ಓರ್ವ ಪಾರು

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಬೈಕ್‌ ಗೆ ಕಾರು ಡಿಕ್ಕಿ, ಇಬ್ಬರು ಗಂಭೀರ, ಓರ್ವ ಪಾರು

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೂರಜ್‌ ಇಂಟರ್‌ನ್ಯಾಷನಲ್‌ ಹೋಟೆಲ್‌ ಬಳಿ ಭೀಕರ ಅಪಘಾತ ನಡೆದಿದೆ. ರಸ್ತೆ ದಾಟಲೆಂದು ಹೋದಾಗ ಈ ಅವಘಡ ನಡೆದಿದೆ. ಸುರತ್ಕಲ್‌ ಬಳಿಯ ಹೋಟೆಲ್‌ ಮುಂದುಗಡೆ ಈ ಅಪಘಾತ ನಡೆದಿದೆ. ಸವಾರರು ಯಾವುದೇ ನಿಯಮ ಪಾಲನೆ ಮಾಡಿಲ್ಲ. ಹೆಲ್ಮೆಟ್‌ ಕೂಡಾ ಧರಿಸಿಲ್ಲ. 

ತ್ರಿಬಲ್‌ ರೈಡಿಂಗ್‌ ಮಾಡ್ತಾ ಇದ್ದ ಸವಾರರು, ಏಕಾಏಕಿ ಹೆದ್ದಾರಿಗೆ ನುಗ್ಗಿದ್ದು ಕಾರೊಂದು ಟಚ್‌ ಆಗಿದ್ದು, ಪಾಸ್‌ ಆಗಿದೆ. ಆಗ ಇನ್ನೊಂದು ಕಾರು ಬಂದಿದೆ. ಅದು ಈ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸವಾರರು ಪುಟ್ಬಾಲ್‌ನಂತೆ ಹಾರಿ ಬಿದ್ದಿದ್ದಾರೆ.

ಕಾರು ಡಿಕ್ಕಿ ರಭಸಕ್ಕೆ ಓರ್ವ ಪಾರಾಗಿದ್ದು, ಇಬ್ಬರ ಪರಿಸ್ಥಿತಿ ಗಂಭೀರ ಎನ್ನಲಾಗಿದೆ. ಸುರತ್ಕಲ್‌ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.