HomeKarnataka State Politics UpdatesRamya : ಅಂಬರೀಶ್ ಅಂತಿಮ ಸಂಸ್ಕಾರಕ್ಕೆ ರಮ್ಯಾ ತಪ್ಪಿಸಿಕೊಂಡದ್ದು ಯಾಕೆ ಗೊತ್ತೇ, ಸತ್ಯ ಬಹಿರಂಗ !

Ramya : ಅಂಬರೀಶ್ ಅಂತಿಮ ಸಂಸ್ಕಾರಕ್ಕೆ ರಮ್ಯಾ ತಪ್ಪಿಸಿಕೊಂಡದ್ದು ಯಾಕೆ ಗೊತ್ತೇ, ಸತ್ಯ ಬಹಿರಂಗ !

Hindu neighbor gifts plot of land

Hindu neighbour gifts land to Muslim journalist

Ramya : ನಟಿ ರಮ್ಯಾ (Ramya) ಅವರು ಸಿನಿಮಾ ಹಾಗೂ ರಾಜಕೀಯ (Politics) ಎರಡರಲ್ಲೂ ತಮ್ಮ ಹವಾ ತುಂಬಾ ಚೆನ್ನಾಗಿ ಸಂಬಾಳಿಸಿಕೊಂಡು ಬರುತ್ತಿದ್ದಾರೆ. ಸದ್ಯ ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ಪ್ರಸ್ತುತ ಬ್ಯುಸಿ ಆಗಿದ್ದಾರೆ.

ಇದೀಗ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳು ರಮ್ಯಾ ಮೇಲೆ ಆಕ್ರೋಶಗೊಂಡಿದ್ದಾರೆ. ಹೌದು , ರಮ್ಯಾ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಲು ಪ್ರಮುಖ ಕಾರಣ ಅಂಬರೀಶ್. ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಿದ್ದ ರಮ್ಯಾರ ಬೆನ್ನಿಗೆ ನಿಂತಿದ್ದ ಅಂಬರೀಶ್, ಅವರೊಟ್ಟಿಗೆ ಪ್ರತಿದಿನ ಪ್ರಚಾರ ಮಾಡಿ ರಮ್ಯಾರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸಿದ್ದರು. ಆದರೆ ತಾವೇಕೆ ಅಂಬರೀಶ್ (Ambareesh) ನಿಧನರಾದಾಗ ಅಂತಿಮದರ್ಶನಕ್ಕೆ ಆಗಮಿಸಲಿಲ್ಲ ಎಂಬುದನ್ನು ಜನರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಅಂಬಿ ಅಭಿಮಾನಿಗಳು ಕೂಡ ಈ ವಿಚಾರದಲ್ಲಿ ರಮ್ಯಾ (Ramya) ವಿರುದ್ಧ ಕಿಡಿಕಾರಿದ್ದರು. ಇದೀಗ ಸ್ವತಃ ನಟಿಯೇ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತಾ ಅಂಬಿ ಸಾವಿಗೆ ಬರದ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಆ ಸಮಯದಲ್ಲಿ ನನಗೆ ಗಂಭೀರ ಆರೋಗ್ಯ ಸಮಸ್ಯೆಯಾಗಿತ್ತು. ನನಗೆ ಟ್ಯೂಮರ್ ಆಗಿತ್ತು, ಅದರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ, ಅದು ಮಾತ್ರವೇ ಅಲ್ಲದೆ ಆಟೊಇಮ್ಯೂನ್ ಸಮಸ್ಯೆಗೂ ತುತ್ತಾಗಿದ್ದೆ. ಆದರೆ ಇದನ್ನೆಲ್ಲ ನಾನು ಕ್ಯಾಮೆರಾ ಮುಂದೆ ಹಂಚಿಕೊಳ್ಳಲಲ್ಲ, ಹೀಗೆ ಸಮಸ್ಯೆಗಳನ್ನು ಹಂಚಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುವ ವ್ಯಕ್ತಿತ್ವ ನನ್ನದಲ್ಲ. ನಾನು ಮೊದಲಿನಿಂದಲೂ ನನ್ನ ಖಾಸಗಿ ಜೀವನವನ್ನು ಗೌಪ್ಯವಾಗಿಯೇ ಇಟ್ಟುಕೊಂಡಿದ್ದೇನೆ. ಆದರೆ ನನ್ನ ಪರಸ್ಥಿತಿ ಗೊತ್ತಿಲ್ಲದೆ ಕೆಲವರು ಅಪಪ್ರಚಾರ ಮಾಡಿದ್ದಾರೆ ” ಎಂದು ಮಾಧ್ಯಮ ಮೂಲಕ ತಿಳಿಸಿದ್ದಾರೆ.

ಇನ್ನು ” ಯಾರು ಏನೇ ಹೇಳಿದರು ನಾನು ಮಂಡ್ಯದವಳು, ನನ್ನ ತಾಯಿ, ತಂದೆ ಇಲ್ಲಿನವರು, ನಾನು ಮಂಡ್ಯ ಗೌಡ್ತಿ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾನು ಸಂಕಷ್ಟದಲ್ಲಿ ಇದ್ದ ಸಮಯದಲ್ಲಿ ಇಲ್ಲಿನ ಜನ ಪ್ರೀತಿ ತೋರಿದ್ದಾರೆ. ಮಂಡ್ಯ ಜನರ ಬಗ್ಗೆ ಸದಾ ಗೌರವ ಇದೆ. ಮಂಡ್ಯದೊಟ್ಟಿಗೆ ನನ್ನದು ಕೇವಲ ರಾಜಕೀಯ ಸಂಬಂಧವಲ್ಲ. ನನ್ನ ಕುಟುಂಬ ಇಲ್ಲಿದೆ” ಎಂದು ಮಂಡ್ಯ ಮೇಲಿನ ರಾಜಕೀಯ ಮತ್ತು ಕೌಟುಂಬಿಕ ಭಾವನೆಗಳನ್ನು ಜನರ ಮುಂದೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೂತ್ರ ಈ ಬಣ್ಣದಲ್ಲಿ ಬಂದರೆ ಉದಾಸೀನ ಮಾಡಬೇಡಿ, ಈ ವಿಷಯ ಗೊತ್ತಾ?

RELATED ARTICLES

2 COMMENTS

Most Popular

Recent Comments