Home ಬೆಂಗಳೂರು ಪತಿ ಮಾಡಿದ ಸಾಲಕ್ಕೆ ಪತ್ನಿಯನ್ನು ಠಾಣೆಗೆ ಕರೆತಂದು ಟಾರ್ಚರ್ | ಅವಮಾನ ಸಹಿಸದ ಪತ್ನಿ...

ಪತಿ ಮಾಡಿದ ಸಾಲಕ್ಕೆ ಪತ್ನಿಯನ್ನು ಠಾಣೆಗೆ ಕರೆತಂದು ಟಾರ್ಚರ್ | ಅವಮಾನ ಸಹಿಸದ ಪತ್ನಿ ನೇಣಿಗೆ ಶರಣು

Hindu neighbor gifts plot of land

Hindu neighbour gifts land to Muslim journalist

ಪತಿ ಮಾಡಿದ ಸಾಲಕ್ಕೆ ಹೆಂಡತಿಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆಂದು ನೊಂದ ಮಹಿಳೆಯೊಬ್ಬಳು ಮನೆಗೆ ವಾಪಾಸು ಬಂದಾಗ ನೇಣಿಗೆ ಶರಣಾಗಿದ್ದಾಳೆ.

ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಮಾರುತಿನಗರದಲ್ಲಿ ಘಟನೆ ನಡೆದಿದೆ. ಅಖಿಲಾ ( 35) ದುರ್ದೈವಿ.

ಫ್ರಾಡ್, ಫ್ರಾಡ್ ಅಂತಾ ಸದಾ ಅವಮಾನ ಮಾಡುತ್ತಾರೆ ಎಂದು ಡೆತ್ ನೋಟ್ ಬರೆದು ಅಖಿಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅಖಿಲಾಗೆ ಎರಡು ಮಕ್ಕಳಿದ್ದಾರೆ.

ಅಖಿಲಾ ಅವರ ಗಂಡ ಮಧುಕುಮಾರ್ ಸ್ಥಳೀಯ ನಿವಾಸಿ ಚಂದನ್ ಅಲಿಯಾಸ್ ಚನ್ನಕೇಶವ‌ ಎಂಬಾತನ ಬಳಿ‌ 1 ಲಕ್ಷ ಹಣ ಸಾಲ ಮಾಡಿದ್ದರು. ಹಣ ವಾಪಾಸು ನೀಡದಿದ್ದಕ್ಕೆ ಚಂದನ್ ಕಿರುಕುಳ ನೀಡುತ್ತಿದ್ದ. ಪೊಲೀಸರ ಕಡೆಯಿಂದನೂ ಕಿರುಕುಳ ನೀಡುತ್ತಿದ್ದ ಎಂದು ಆರೋಪವಿದೆ.

ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಅಖಿಲಾರನ್ನು ಠಾಣೆಗೆ ಕರೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್ ಸ್ಟೇಷನ್ ನಿಂದ ವಾಪಾಸ್ ಬಂದವಳೇ ಸೀದಾ ನೇಣಿಗೆ ಶರಣಾಗಿದ್ದಾಳೆ.

ನೆಲಮಂಗಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.