Home ಬೆಂಗಳೂರು ಆತ್ಮದ ಜೊತೆ ಸಂಧಾನದ ಅಧ್ಯಯನಕ್ಕೆ ಹೊರಟ ಅಪ್ರಾಪ್ತೆ ಕಣ್ಮರೆ | ವಿಶೇಷ ಪ್ರಕರಣದ ಹಿಂದಿದೆ ಕಾಣದ...

ಆತ್ಮದ ಜೊತೆ ಸಂಧಾನದ ಅಧ್ಯಯನಕ್ಕೆ ಹೊರಟ ಅಪ್ರಾಪ್ತೆ ಕಣ್ಮರೆ | ವಿಶೇಷ ಪ್ರಕರಣದ ಹಿಂದಿದೆ ಕಾಣದ ಶಕ್ತಿಯೊಂದರ ಕೈವಾಡ!!

Hindu neighbor gifts plot of land

Hindu neighbour gifts land to Muslim journalist

ಈ ವರೆಗೂ ಒಬ್ಬಂಟಿಯಾಗಿ ಹೊರಗೆ ಹೋಗದ ಯುವತಿಯೊಬ್ಬಳು ಮಾಟ ಮಂತ್ರದ ಆಕರ್ಷಣೆಗೊಳಗಾಗಿ ಮನೆ ಬಿಟ್ಟು ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಬೆಂಗಳೂರು ಮೂಲದ ಅಭಿಷೇಕ್ ಹಾಗೂ ಅರ್ಚನಾ ದಂಪತಿ ಪುತ್ರಿಯಾಗಿರುವ ಅನುಷ್ಕಾ(17) ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದು ಎಲ್ಲೆಡೆ ಹುಡುಕಾಟ ನಡೆಸಲಾಗುತ್ತಿದೆ.

ಆತ್ಮಗಳ ಜೊತೆಗೆ ಸಂಭಾಷಣೆ ನಡೆಸಲು ಬಯಸಿದ್ದ ಅನುಷ್ಕಾಳಿಗೆ ಮನೆಯಲ್ಲಿಯೇ ಕಲಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಮಾಟ ಮಂತ್ರದ ಬಗೆಗೆ ಹೆಚ್ಚೆಚ್ಚು ವೀಡಿಯೋಗಳನ್ನು ನೋಡುದಿದ್ದಳು.ಆದರೆ ಯಾರೋ ಕಿಡಿಗೇಡಿಗಳು ಆಕೆಯ ಮೇಲೆ ಪ್ರಭಾವ ಬೀರಿ ಮನೆ ಬಿಟ್ಟು ಬರುವಂತೆ ಒತ್ತಾಯಿಸಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿಯೇ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡಿದೆ. ಆದರೆ ಅಕ್ಟೋಬರ್ 31 ರಂದು 2500 ನಗದು ಸಹಿತ ಬಟ್ಟೆ ತೆಗೆದುಕೊಂಡು ಮನೆ ಬಿಟ್ಟು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.