Home Karnataka State Politics Updates ಪೆರೋಲ್ ಖೈದಿ ನಾಪತ್ತೆಯಾದರೆ ಜಾಮೀನು ಕೊಟ್ಟವರ ಆಸ್ತಿ ಜಪ್ತಿ: ಸಚಿವ ಅರಗ ಜ್ಞಾನೇಂದ್ರ

ಪೆರೋಲ್ ಖೈದಿ ನಾಪತ್ತೆಯಾದರೆ ಜಾಮೀನು ಕೊಟ್ಟವರ ಆಸ್ತಿ ಜಪ್ತಿ: ಸಚಿವ ಅರಗ ಜ್ಞಾನೇಂದ್ರ

Hindu neighbor gifts plot of land

Hindu neighbour gifts land to Muslim journalist

ರಾಜ್ಯದಲ್ಲಿ ಇನ್ಮುಂದೆ ಪೆರೋಲ್ ಖೈದಿ ನಾಪತ್ತೆಯಾದರೆ, ಜಾಮೀನು ಕೊಟ್ಟವರ ಆಸ್ತಿ ಜಪ್ತಿ ಮಾಡಲಾಗುತ್ತೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವಿಧಾನಪರಿಷತ್ ನಲ್ಲಿ ಅಂಗೀಕರಿಸಿದ್ದಾರೆ.

ಈ ಕುರಿತು ಮಾತನಾಡಿದ ಜ್ಞಾನೇಂದ್ರ ಅವರು, ಈ ವಿಧೇಯಕವನ್ನು ಪೆರೋಲ್ ಪಡೆದ ವ್ಯಕ್ತಿಗೆ ಜಾಮೀನು ನೀಡುವ ವ್ಯಕ್ತಿ ಜವಾಬ್ದಾರಿ ಹೊಂದಿರಬೇಕು ಎಂಬ ಕಾರಣದಿಂದಾಗಿ ತರಲಾಗಿದೆ.

ಈ ತಿದ್ದು ಪಡಿಯಿಂದಾಗಿ ನ್ಯಾಯಯುತವಾಗಿ ಜಾಮೀನು ನೀಡಿದ ವ್ಯಕ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಜಾಮೀನು ನೀಡುವುದನ್ನೇ ದಂಧೆ ಮಾಡಿಕೊಂಡವರಿಗೆ, ಆ ಕೆಲಸ ಮಾಡಬಾರದು ಎಂಬ ಕಾರಣದಿಂದ ಈ ತಿದ್ದುಪಡಿ ಮಾಡಲಾಗಿದೆ.

ಇಲ್ಲಿಯವರೆಗೆ 15 ಖೈದಿಗಳು ಪೆರೋಲ್ ಮೇಲೆ ತೆರಳಿ ನಾಪತ್ತೆಯಾಗಿದ್ದಾರೆ ಹಾಗೂ ಇನ್ನೂ ಕರ್ನಾಟಕ ಬಂಧೀಖಾನೆಗಳ ತಿದ್ದುಪಡಿ ವಿಧೇಯಕದ ಅನುಸಾರವಾಗಿ, ಇನ್ಮುಂದೆ ಪೆರೋಲ್ ಕೈದಿ ನಾಪತ್ತೆಯಾದ್ರೆ, ಜಾಮೀನು ಕೊಟ್ಟವರ ಆಸ್ತಿ ಜಪ್ತಿಯಾಗಲಿದೆ.