Home ದಕ್ಷಿಣ ಕನ್ನಡ Mangalore: ಮಂಗಳೂರು: ದೇವಸ್ಥಾನಕ್ಕೆ ಹೋದ ಮಹಿಳೆ ನಾಪತ್ತೆ

Mangalore: ಮಂಗಳೂರು: ದೇವಸ್ಥಾನಕ್ಕೆ ಹೋದ ಮಹಿಳೆ ನಾಪತ್ತೆ

Hindu neighbor gifts plot of land

Hindu neighbour gifts land to Muslim journalist

Mangalore: ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಆಕಾಶಭವನ ಮುಲ್ಲಕಾಡು ನಿವಾಸಿ ಸದಾಶಿವ ಅವರ ಪತ್ನಿ ಸವಿತಾ (34) ಅವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಸವಿತಾ ಎಂಬವರು 6 ತಿಂಗಳುಗಳಿಂದ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದು, ನ.10ರಂದು ಬೆಳಗ್ಗೆ 10.30ಕ್ಕೆ ಕಟೀಲು (mangaluru ) ದೇವಸ್ಥಾನಕ್ಕೆಂದು ಹೋಗಿದ್ದು, ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಿಳೆಯು ನೋಡಲು ಸಾಮಾನ್ಯರಂತೆ 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ಬಿಳಿಬಣ್ಣದ ಚೂಡಿದಾರ, ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಹಿಂದಿ, ಕನ್ನಡ, ತುಳು ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಾವೂರು ಪೊಲೀಸ್ ಠಾಣೆ(0824- 2220533)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.