Home ದಕ್ಷಿಣ ಕನ್ನಡ ವಿಟ್ಲ:ಸಾರ್ವಜನಿಕವಾಗಿ ಮಹಿಳೆಗೆ ಗಂಭೀರ ಹಲ್ಲೆ-ಕೊಲೆಯತ್ನ!! ಪ್ರಕರಣದ ಆರೋಪಿಯ ಬಂಧನ

ವಿಟ್ಲ:ಸಾರ್ವಜನಿಕವಾಗಿ ಮಹಿಳೆಗೆ ಗಂಭೀರ ಹಲ್ಲೆ-ಕೊಲೆಯತ್ನ!! ಪ್ರಕರಣದ ಆರೋಪಿಯ ಬಂಧನ

Hindu neighbor gifts plot of land

Hindu neighbour gifts land to Muslim journalist

ವಿಟ್ಲ: ಇಲ್ಲಿನ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ಮೇ 07ರಂದು ಹಾಡಹಗಲೇ ಮಹಿಳೆಯೊಬ್ಬರ ಮೇಲೆ ಸಾರ್ವಜನಿಕವಾಗಿ ಗಂಭೀರ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಪ್ರಕರಣದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನಾಟೆಕಲ್ ನವಗ್ರಾಮದ ನಿವಾಸಿ, ಸೆಂಟ್ರಿಂಗ್ ಶೇಖರ್ ಅಲಿಯಾಸ್ ಶೇಖರ ಪೂಜಾರಿ ಎಂದು ಗುರುತಿಸಲಾಗಿದೆ.

ಮೇ 07ರಂದು ಪೇಟೆಯಲ್ಲಿಯೇ ಮಹಿಳೆಯ ಮೇಲೆ ಮುಗಿಬಿದ್ದ ಆರೋಪಿ, ಹಿಗ್ಗಾ ಮುಗ್ಗಾ ಥಳಿಸಿದ್ದು, ಮಚ್ಚು ಬೀಸಿ ಕೊಲೆಗೂ ಯತ್ನಿಸಿದ್ದ. ಸಾರ್ವಜನಿಕರ ಎದುರೇ ಘಟನೆ ನಡೆದಿದ್ದರೂ, ಪ್ರತ್ಯಕ್ಷದರ್ಶಿಗಳು ಮೌನ ವಹಿಸಿದ್ದು, ಬಳಿಕ ಗಂಭೀರ ಗಾಯಗೊಂಡಿದ್ದ ಮಹಿಳೆಗೆ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆತರಲಾಗಿತ್ತು.

ಸದ್ಯ ಗಂಭೀರ ಗಾಯಗೊಂಡ ಮಹಿಳೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಗಂಭೀರ ಹಲ್ಲೆಗೆ ಕಾರಣ ಏನೆಂಬುವುದು ಪೊಲೀಸರ ವಿಚಾರಣೆಯ ಬಳಿಕ ತಿಳಿಯಬೇಕಾಗಿದೆ.