Homeದಕ್ಷಿಣ ಕನ್ನಡವಿಟ್ಲ : ತೆಂಗಿನ ಕಾಯಿ ಹೆಕ್ಕುತ್ತಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ವಿಟ್ಲ : ತೆಂಗಿನ ಕಾಯಿ ಹೆಕ್ಕುತ್ತಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು

Hindu neighbor gifts plot of land

Hindu neighbour gifts land to Muslim journalist

ವಿಟ್ಲ: ತೋಟದ ಕೆರೆಯ ಬದಿಯಲ್ಲಿ ತೆಂಗಿನ ಕಾಯಿ ಹೆಕ್ಕುತ್ತಿದ್ದ ವೇಳೆ ವ್ಯಕ್ತಿಯೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಅಳಿಕೆ ಗ್ರಾಮದಲ್ಲಿ ನಡೆದಿದೆ.

ಅಳಿಕೆ ಗ್ರಾಮದ ಪಡೀಲ್ ನಿವಾಸಿ ಹಮೀದ್ (54 ವ)ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮೃತರು ತಮ್ಮ ಮನೆಯ ತೋಟದ ಕೆರೆಯ ಬದಿಯಲ್ಲಿದ್ದ ಎರಡು ತೆಂಗಿನಕಾಯಿ ಹೆಕ್ಕಿ ಮೇಲೆತ್ತಿದ್ದರು. ಈ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಮನೆಯಿಂದ ತೋಟದ ಕಡೆಗೆ ಹೊರಟ ಹಮೀದ್ ಅವರು ಹೊತ್ತಾದರೂ ಮನೆಗೆ ಬಾರದ ಹಿನ್ನಲೆ ಮನೆಯವರು ತೋಟಕ್ಕೆ ಹುಡುಕಿಕೊಂಡು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಮೃತರು ಪತ್ನಿ ಮತ್ತು 4 ಮಕ್ಕಳನ್ನು ಅಗಲಿದ್ದು,ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Most Popular

Recent Comments