Home ದಕ್ಷಿಣ ಕನ್ನಡ “ಈ ವಾರದ ಒಳಗೆ ನೀ ಫಿನಿಶ್ ” | ಮಂಗಳೂರಿನ ವಿದ್ಯಾರ್ಥಿಗೆ ವಿದೇಶದಿಂದ ಕರೆ...

“ಈ ವಾರದ ಒಳಗೆ ನೀ ಫಿನಿಶ್ ” | ಮಂಗಳೂರಿನ ವಿದ್ಯಾರ್ಥಿಗೆ ವಿದೇಶದಿಂದ ಕರೆ ಮಾಡುತ್ತಿರುವ ಮುಸ್ಲಿಂ ಸಂಘಟನೆಗಳು !

Hindu neighbor gifts plot of land

Hindu neighbour gifts land to Muslim journalist

ಹಿಜಾಬ್ ಸಂಘರ್ಷ ಇನ್ನೂ ಕೂಡಾ ಮುಗಿದಿಲ್ಲ. ಇತ್ತೀಚೆಗಷ್ಟೇ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ಡಾ.ಪಿ.ದಯಾನಂದ ಪೈ – ಪಿ ಸತೀಶ್ ಪೈ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಎದ್ದಿದ್ದು, ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆಯೊಂದು ವರದಿಯಾಗಿತ್ತು.

ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಅನುಮತಿಯ ಮೇರೆಗೆ ಪರೀಕ್ಷೆಗೆ ಹಾಜರಾಗಿದ್ದರು. ಇದಕ್ಕೆ ಹಿಂದೂ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ ಪರೀಕ್ಷೆ ಬರೆಯಲು ಅನುಮತಿ ನೀಡದಂತೆ ಒತ್ತಾಯಿಸಿದ್ದರು.

ನಂತರ ಪ್ರಾಂಶುಪಾಲರ ಮುಂದಾಳತ್ವದಲ್ಲಿ ಪೋಷಕರ ಸಭೆ ಕರೆದು ಎರಡೂ ಕಡೆಯ ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಪ್ರಕರಣವನ್ನು ತಿಳಿಗೊಳಿಸಲಾಯಿತು.

ಈಗ ಈ ಹಿಜಾಬ್ ವಿಚಾರದಲ್ಲಿ ಸಂಘರ್ಷಕ್ಕಿಳಿದಿದ್ದ ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಮಂಗಳೂರಿನ ರಥಬೀದಿ ಕಾಲೇಜಿನ ವಿದ್ಯಾರ್ಥಿ ಸಂದೇಶ್ ಗೆ ಈ ಕೊಲೆ ಬೆದರಿಕೆ ಕಾಲ್ ಗಳು ಬರ್ತಾ ಇದೆ.

ವಾಟ್ಸಪ್, ಇನ್ಸ್ಟಾಗ್ರಾಂ, ವಿದೇಶಗಳಿಂದ ಹತ್ತಾರು ಮಿಸ್ ಕಾಲ್ ಬರುತ್ತಲೇ ಇದೆಯಂತೆ. ‘ ನಿನ್ನ ಫುಲ್ ಡಿಟೈಲ್ ಸಿಕ್ಕಿದೆ. ಎಲ್ಲಿಂದ ಬರ್ತೀಯಾ, ಎಲ್ಲಿಂದ ಹೋಗ್ತೀಯಾ ಅಂತ. ‘ ನಿನ್ನ ತಾಯಿ ಪತಿವ್ರತೆ ಆಗಿದ್ದರೆ ನಮ್ಮ ಕೈಯಿಂದ ತಪ್ಪಿಸು ನೋಡುವ’, ‘ಒಂದು ವಾರದೊಳಗೆ ನಿನ್ನ ಗೇಮ್ ಫಿನಿಷ್ ಮಾಡುತ್ತೇನೆ’ ಎಂದೆಲ್ಲಾ ಬೆದರಿಕೆಯ ಮಾಹಿತಿ ಬರಲಾರಂಭಿಸಿದೆ.

ಜಾಸ್ತಿ ದಿನ ಇರಲ್ಲ. ಜೀವದ ಆಸೆ ಬಿಡು ಅಂತ ಮೆಸೇಜ್ ಮೇಲೆ ಮೆಸೇಜ್ ಬರ್ತಾನೆ ಇದೆಯಂತೆ.