Home ದಕ್ಷಿಣ ಕನ್ನಡ ಸುಬ್ರಹ್ಮಣ್ಯ: ದೇವರ ಮುಂದೆ ಮಕ್ಕಳು ಮಾಡಿದ ಕುಣಿತ ಭಜನೆಯಲ್ಲಿ ಜಾತಿಯ ಎಳೆತಂದ ಸರ್ಕಾರಿ ಅಧಿಕಾರಿ!!ಶೂದ್ರ-ವೈಷ್ಯ ರ...

ಸುಬ್ರಹ್ಮಣ್ಯ: ದೇವರ ಮುಂದೆ ಮಕ್ಕಳು ಮಾಡಿದ ಕುಣಿತ ಭಜನೆಯಲ್ಲಿ ಜಾತಿಯ ಎಳೆತಂದ ಸರ್ಕಾರಿ ಅಧಿಕಾರಿ!!ಶೂದ್ರ-ವೈಷ್ಯ ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಟುವಾದ ಮಾತು!!

Hindu neighbor gifts plot of land

Hindu neighbour gifts land to Muslim journalist

ಚಂಪಾಷಷ್ಠಿಯ ಪ್ರಯುಕ್ತ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ದಿನ ಮಕ್ಕಳು ಮಾಡಿದ್ದ ಕುಣಿತ ಭಜನೆಯ ವಿಚಾರದಲ್ಲಿ ಜಾತಿಯ ಧೋರಣೆ ವ್ಯಕ್ತವಾಗಿ,ಸರ್ಕಾರಿ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಾತಿಯ ವಿಚಾರ ಪ್ರಸ್ತಾಪಿಸಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು,ಸದ್ಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ದೇವರ ಎದುರು ಮಕ್ಕಳು ಮಾಡಿದ್ದ ಕುಣಿತ ಭಜನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಹರಿದಾಡಿದ್ದು, ಇದನ್ನು ಕಂಡ ಕಾಣಿಯೂರು ಮೂಲದ ಸರ್ಕಾರಿ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೂದ್ರರು-ವೈಷ್ಯರು ಎಂಬಂತೆ ಜಾತಿಯ ಬೀಜ ಬಿತ್ತಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಸದ್ಯ ಅಧಿಕಾರಿಯ ವಿರುದ್ಧ ಹಿಂಜಾವೇ ವತಿಯಿಂದ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.