Home ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶದ ನಿರ್ಬಂಧನೆ ನಡುವೆಯೇ ಮಂಗಳೂರಿನತ್ತ ಮುತಾಲಿಕ್!! ಅರ್ಧ ದಾರಿಯಲ್ಲೇ ಪೊಲೀಸರ ವಶಕ್ಕೆ

ಜಿಲ್ಲೆ ಪ್ರವೇಶದ ನಿರ್ಬಂಧನೆ ನಡುವೆಯೇ ಮಂಗಳೂರಿನತ್ತ ಮುತಾಲಿಕ್!! ಅರ್ಧ ದಾರಿಯಲ್ಲೇ ಪೊಲೀಸರ ವಶಕ್ಕೆ

Hindu neighbor gifts plot of land

Hindu neighbour gifts land to Muslim journalist

ಶ್ರೀ ರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸದಂತೆ ನಿರ್ಬಂಧನೆ ವಿಧಿಸಲಾಗಿದ್ದರೂ ಜಿಲ್ಲೆಗೆ ಬರಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಜಿಲ್ಲೆಯ ಪುತ್ತೂರಿನ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕೊಡಲು ಆಗಮಿಸುತ್ತಿದ್ದ ಮುತಾಲಿಕ್ ರನ್ನು ಮಂಗಳೂರು-ಉಡುಪಿ ಹೆದ್ದಾರಿಯ ಹೆಜಮಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಕ ಜಿಲ್ಲೆಯಲ್ಲಿ ಕೋಮು ಸೂಕ್ಷ್ಮವಾಗಿರುವ ಕಾರಣ ಕೋಮು ಪ್ರಚೋದಕಾರಿ ಭಾಷಣದ ಹಿನ್ನೆಲೆಯಿರುವ ಮುತಾಲಿಕ್ ಗೆ ಆಗಸ್ಟ್ ಮೂರರ ವರೆಗೆ ಜಿಲ್ಲೆ ಪ್ರವೇಶ ಮಾಡದಂತೆ ಜಿಲ್ಲಾಧಿಕಾರಿ ನಿರ್ಬಂಧನೆ ವಿಧಿಸಿ ಆದೇಶಿಸಿದ್ದರು.ಆದರೆ ಇಂದು ಅದ್ಯಾವುದನ್ನೂ ಲೆಕ್ಕಿಸದೇ ಜಿಲ್ಲೆ ಪ್ರವೇಶಕ್ಕೆ ಮುಂದಾಗಿರುವ ಮಾಹಿತಿ ಪಡೆದ ಪೊಲೀಸರು ಅರ್ಧ ದಾರಿಯಲ್ಲೇ ವಶಕ್ಕೆ ಪಡೆದಿದ್ದಾರೆ.