Home ದಕ್ಷಿಣ ಕನ್ನಡ ಚಾರ್ಮಾಡಿ ಘಾಟ್ ನಲ್ಲಿ ಮಳೆಯ ನಡುವೆಯೇ ಹೊತ್ತಿ ಉರಿದ ಪುಟ್ಟ ಮಗು ಸಹಿತ ನಾಲ್ವರಿದ್ದ ಕಾರು!!

ಚಾರ್ಮಾಡಿ ಘಾಟ್ ನಲ್ಲಿ ಮಳೆಯ ನಡುವೆಯೇ ಹೊತ್ತಿ ಉರಿದ ಪುಟ್ಟ ಮಗು ಸಹಿತ ನಾಲ್ವರಿದ್ದ ಕಾರು!!

Hindu neighbor gifts plot of land

Hindu neighbour gifts land to Muslim journalist

ಚಾರ್ಮಾಡಿ: ಪುಟ್ಟ ಮಗು ಸಹಿತ ನಾಲ್ವರು ಪ್ರಯಾಣಿಕರಿದ್ದ ಕಾರೊಂದು ಮಳೆಯ ನಡುವೆಯೇ ಹೊತ್ತಿ ಉರಿದ ಘಟನೆಯೊಂದು ಮೂಡಿಗೆರೆ ತಾಲೂಕಿನ ಜೇನ್ ಕಲ್ ದೇವಸ್ಥಾನದ ಬಳಿ ನಡೆದಿದ್ದು, ಅದೃಷ್ಟವಶಾತ್ ನಾಲ್ವರು ಪ್ರಯಾಣಿಕರು ಕಾರಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ.

ಜುಲೈ 11 ರ ರಾತ್ರಿ ಘಟನೆ ನಡೆದಿದ್ದು,ಮಂಗಳೂರಿಂದ ಬೆಂಗಳೂರಿಗೆ ತೆರಳುತ್ತಿದ್ದ ಕುಟುಂಬ ಸದಸ್ಯರಿದ್ದ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದು, ಅಪಾಯ ಅರಿತ ಕುಟುಂಬ ಕೂಡಲೇ ಕಾರಿನಿಂದ ಇಳಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಬಣಕಲ್ ಪೊಲೀಸರು ಪರಿಶೀಲನೆ ನಡೆಸಿದ್ದು, ಕಣ್ಣೆದುರೇ ಕಾರು ಹೊತ್ತಿ ಉರಿಯುತ್ತಿರುವುದನ್ನು ಕಂಡ ಕಾರಿನ ಮಾಲೀಕನ ರೋಧನೆ ಮುಗಿಲುಮುಟ್ಟಿತ್ತು.