Home » ಬಂಟ್ವಾಳ : ಜಾಗದ ವೀಕ್ಷಣೆ, ತಂಡದಿಂದ ಮಹಿಳೆ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಆರೋಪ!

ಬಂಟ್ವಾಳ : ಜಾಗದ ವೀಕ್ಷಣೆ, ತಂಡದಿಂದ ಮಹಿಳೆ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಆರೋಪ!

0 comments

ಬಂಟ್ವಾಳ: ಜಾಗದ ವೀಕ್ಷಣೆಗೆಂದು ತೆರಳಿದ್ದವರಿಗೆ ಅಲ್ಲಿಗೆ ಬಂದ ತಂಡವೊಂದು ಹಲ್ಲೆ ನಡೆಸಿದ ಘಟನೆಯೊಂದು ಬಂಟ್ವಾಳ ಸಮೀಪದ ಜಕ್ರಿಬೆಟ್ಟಿನಲ್ಲಿ ನಡೆದಿದೆ.

ಎ. 24ರಂದು ಸಂಜೆ 6 ಗಂಟೆಗೆ ಜಕ್ರಿಬೆಟ್ಟು ನಿವಾಸಿ ಭುವನೇಶ್ವರಿ ರೈ ಅವರು ತಮಗೂ ಹಾಗೂ ರೀಟಾ ಸಿಕ್ವೆರಾಗೆ ಇರುವ ವಿವಾದಿತ ಜಾಗಕ್ಕೆ ಮೈಸೂರಿನಿಂದ ಪರಿಚಯದ ಸಂಘಟನೆಯೊಂದರ ಶಿವು ಗೌಡ ಹಾಗೂ ಅವರ ಲಿಖಿತಾ ಅವರನ್ನು ಕರೆಸಿ ಜಾಗ ವೀಕ್ಷಣೆ ಮಾಡುತ್ತಿರುವಾಗ ತಂಡವೊಂದು ಆಗಮಿಸಿ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳಾದ ಸಂದೇಶ, ಸಂದೇಶನ ಪತ್ನಿ, ಆತನ ಸಹೋದರ, ಸುರೇಶ ಪೂಜಾರಿ, ಸುರೇಶ ಕುಲಾಲ್, ಶಾಲಿನಿ, ರೀಟಾ ಸಿಕ್ವೆರಾರ ಸಹೋದರಿ, ಸೀತಾರಾಮ ಶೆಟ್ಟಿ ಮತ್ತು ಇತರರು ಹಾರೆ, ಗುದ್ದಲಿ ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಭುವನೇಶ್ವರಿ ರೈ ಅವರ ಬಟ್ಟೆ ಹರಿದು, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

banner

You may also like

Leave a Comment