Kolluru: ಶ್ರೀ ಮೂಕಾಂಬಿಕೆಗೆ ನವರತ್ನ ಚಿನ್ನದ ಮುಖವಾಡ ಸಮರ್ಪಣೆ!

Share the Article

Kolluru : ಸುಮಾರು ₹90 ಲಕ್ಷ ಮೌಲ್ಯದ ನವರತ್ನ ಕಲ್ಲುಗಳೊಂದಿಗೆ ಅಲಂಕೃತವಾದ 1 ಕೆ.ಜಿ ತೂಕದ ಚಿನ್ನದ ಮುಖವಾಡವನ್ನು ಬುಧವಾರ ಶ್ರೀ ಕೊಲ್ಲೂರು (Kolluru) ಮೂಕಾಂಬಿಕಾ ದೇವಿಗೆ, ತುಮಕೂರು ಜಿಲ್ಲೆಯ ಶಿರಾದ ಪ್ರಸಿದ್ಧ ಆಯುರ್ವೇದ ವೈದ್ಯ ಡಾ| ಕೆ. ಲಕ್ಷ್ಮೀನಾರಾಯಣ ಅವರ ಕುಟುಂಬವಿಂದು ನೀಡಿದ್ದು , ಅವರು 45 ವರ್ಷಗಳ ಹಿಂದೆಯೇ ದೇವಿಗೆ ಚಿನ್ನದ ಮುಖವಾಡ ಸಮರ್ಪಿಸಲು ಸಂಕಲ್ಪ ಮಾಡಿಕೊಂಡಿದ್ದರು. ಆ ಸಂಕಲ್ಪ ಇಂದು ಸಂಪೂರ್ಣಗೊಂಡಿದೆ.

ಬುಧವಾರ ಬೆಳಿಗ್ಗೆ ರಥಬೀದಿಯಿಂದ ವಾದ್ಯಘೋಷದೊಂದಿಗೆ ಶೋಭಾ ಯಾತ್ರೆಯ ರೂಪದಲ್ಲಿ ಚಿನ್ನದ ಮುಖವಾಡವನ್ನು ದೇಗುಲದ ಆವರಣಕ್ಕೆ ತಂದು, ಅರ್ಚಕರಾದ ಸುಬ್ರಹ್ಮಣ್ಯ ಅಡಿಗ, ನರಸಿಂಹ ಭಟ್ ಮತ್ತು ಕಾಳಿದಾಸ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ ದೇವಿಗೆ ಅರ್ಪಿಸಲಾಯಿತು.

Comments are closed.